ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲದ ಗ್ರಾಮದಲ್ಲಿ ಎರಡು ಮನೆ ದೋಚಿದ ಕಳ್ಳರು.

ನೆಲಮಂಗಲ ತಾಲೂಕಿನ ಶ್ರೀಗಿರಿ ಪುರ ಗ್ರಾಮದಲ್ಲಿ ನಡೆದಿರುವ ಕಳ್ಳತನ; ಒಂದೇ ಗ್ರಾಮದ ಎರಡು ಮನೆಗಳಿಗೆ ಕನ್ನ ಹಾಕಿದ ದರೋಡೆಕೋರರು.

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಬೀಗ ಹಾಕಿದ ಮನೆಯ ಮುಂಬಾಗಿಲು ಮುರಿದ ಕಳ್ಳರು ನಗದು, ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶ್ರೀಗಿರಿ ಪುರ ಗ್ರಾಮದಲ್ಲಿ ನಡೆದಿದೆ.

ಸರಸ್ವತಮ್ಮ ಎಂಬುವವರ ಮನೆಯಲ್ಲಿ ಕಳ್ಳರು ಈ ಕೈಚಳಕ ತೋರಿದ್ದು, ಒಟ್ಟು ಮೂರು ಲಕ್ಷ ನಗದು, ಚಿನ್ನ ,ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.

Two houses burgled in Nelamangala

ಮನೆಯಲ್ಲಿ ಮದುವೆ ಇರುವ ಕಾರಣ ಮದುವೆಗೆಂದು ಹಣ ತಂದಿಡಲಾಗಿತ್ತು. ಮದುವೆ ಕಾರ್ಡ್ ಹಂಚಲು ಸರಸ್ವತಮ್ಮ ಹೊರಗೆ ಹೋಗಿದ್ದರು. ಈ ಸಂದರ್ಭದವನ್ನು ಉಪಯೋಗಿಸಿಕೊಂಡಿರುವ ಕಳ್ಳರು ಕಳ್ಳತನ ಮಾಡಿದ್ದಾರೆ.

ಇದೇ ಗ್ರಾಮದ ಮುರಳಿ ಎನ್ನುವವರ ಮನೆಯಲ್ಲಿಯೂ ಕಳ್ಳತನವಾಗಿದ್ದು, ಅಲ್ಲಿ 20 ಸಾವಿರ ನಗದು, ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕುದುರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

English summary
Robbers have robbed two houses in Shri Giripura village of Nelamangala Taluk, Bengaluru Rural District. In one house they have robbed Rs. 3 Lakh cash and jewellery and in another house Rs. 20,000 cash and jewellery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X