ಹಠಾತ್ ಬಸ್ ತಪಾಸಣೆ ನಡೆಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಬೆಂಗಳೂರು, ಜೂನ್ 26: ಸಾರಿಗೆ ಸಚಿವರಾಗಿ ಡಿ.ಸಿ. ತಮ್ಮಣ್ಣ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅವರ ಇಲಾಖೆ ಸಂಬಂಧಿಸಿದ ಕೆಲಸವನ್ನು ಆರಂಭಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ಗಳ ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಡಜನ್ಗೂ ಹೆಚ್ಚು ಸಚಿವರು ಟ್ವಿಟ್ಟರ್ ಸ್ನೇಹಿಗಳಲ್ಲ
ನಗರದ ಹಾಸನ ಮಾರ್ಗದ ಯಡಿಯೂರು ಬಳಿ ನಿಗಮದ ಬಸ್ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ, ಬೆಂಗಳೂರು-ಕುಂದಾಪುರ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್ ಕೆಎ57 F1710 ಬಸ್ನ ವ್ಹೀಲ್ ಡೋರ್ ಸಮೀಪ ನೆಟ್ ಇಲ್ಲದಿರುವುದನ್ನು ಗಮನಿಸಿ, ನಿಗಮದ ಹಿರಿಯ ಅಧಿಕಾರಿಗಳಿಗೆ ಕೂಡಲೇ ಸರಿಪಡಿಸಲು ಸೂಚಿಸಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗಬಾರದು, ಇನ್ನುಮುಂದೆ ಯಾವುದೇ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಬಸ್ಗಳಲ್ಲಿ ಯಾವುದೇ ರೀತಿಯ ನ್ಯೂನತೆ ಕಂಡುಬಂದಲ್ಲಿ ಕೂಡಲೇ ಕ್ರಮ ಜರುಗಿಸಲಾಗುತ್ತದೆ ಎಂದರು. ಸಚಿವರು ಹಿರಿಯ ಅಧಿಕಾರಿಗಳ ತಂಡದೊಂದಿಗೆ ವಿಭಾಗ, ಘಟಕ, ಬಸ್ ನಿಲ್ದಾಣಗಳ ಪರಿಶೀಲನೆ ನಡೆಸಿದರು.
English summary
Transport minister D.C. Thammanna has made a surprise inspection of buses and given instructions to officials to keep buses in good condition.
Story first published: Tuesday, June 26, 2018, 15:33 [IST]