ಬೆಂಗಳೂರಿನಲ್ಲಿ 12ರಿಂದ ಮೂರು ದಿನ 'ಗೀತಾ ಸಮ್ಮೇಳನ'
ಬೆಂಗಳೂರು, ಡಿ. 9: ನಗರದ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಗೀತಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಡಿ. 12ರಿಂದ ಮೂರು ದಿನಗಳ ಕಾಲ "12ನೇ ಗೀತಾ ಸಮ್ಮೇಳನ" ಹಮ್ಮಿಕೊಳ್ಳಲಾಗಿದೆ. [ಭಗವದ್ಗೀತೆಯಲ್ಲಿ ಆರೋಗ್ಯ ಸೂತ್ರ]
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್ ಮುಖ್ಯಸ್ಥ ಡಾ. ಪಿ.ವಿ. ನಾಥ, ಡಿ. 12ರಂದು ಮೈಸೂರು ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸುವರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಧ್ವನಿ ಸುರುಳಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದು ತಿಳಿಸಿದರು. [ಭಗವದ್ಗೀತೆ ಪಾಶಾಗೆ ಜೈ ಹೋ]
ಈ ಸಮ್ಮೇಳನವು ಭಗವದ್ಗೀತೆಯ 12ನೇ ಭಕ್ತಿ ಅಧ್ಯಾಯವನ್ನು ಒಳಗೊಂಡಿದೆ. ವಿದ್ವಾಂಸರು, ಚಿಂತಕರಿಂದ ಭಗವದ್ಗೀತಾ ಘೋಷ, ಅದರ ಅರ್ಥ, ಗೀತಾ ಸಾರ, ಭಕ್ತಿ ಮತ್ತು ಸ್ವಾಮಿ, ಭಕ್ತಿ, ಜ್ಞಾನ, ಕರ್ಮ, ಧ್ಯಾನ ಪದಗಳ ತತ್ವಾರ್ಥ ಸೇರಿದಂತೆ ಭಗವದ್ಗೀತೆಯ ವಿವಿಧ ಆಯಾಮಗಳನ್ನು ತಿಳಿಸಿಕೊಡಲಾಗುವುದು ಎಂದರು. [ಭಗವದ್ಗೀತೆ ವೆಬ್ ಸೈಟ್ ಗೆ ಚಾಲನೆ]
ಗೀತೆ ಮತ್ತು ಸಂಸ್ಥಾ ನಿರ್ವಹಣೆ, ಗೀತೆ ಮತ್ತು ಮಹಾತ್ಮಾ ಗಾಂಧಿ, ಭಕ್ತಿ ಯೋಗದ ನೆಲೆಯಲ್ಲಿ ಧ್ಯಾನ ಶ್ಲೋಕ ಮುಂತಾದ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪಿ.ವಿ. ನಾಥ ವಿವರಿಸಿದರು. [ಅಮೆರಿಕ ಸಂಸದೆ ಭಗವದ್ಗೀತೆ ಮೇಲೆ ಪ್ರಮಾಣ ವಚನ]