ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ
ಬೆಂಗಳೂರು, ಫೆಬ್ರವರಿ, 15: ಮಹಾನಗರದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಉತ್ತಮ ರಸ್ತೆ ನಿರ್ಮಾಣ, ಮೇಲ್ಸೇತುವೆ, ಸ್ಕೈ ವಾಕ್ ಗಳ ನಿರ್ಮಾಣವೂ ಚಾಲ್ತಿಯಲ್ಲಿದೆ.
ಇದೆಲ್ಲದರ ನಡುವೆ ಓಕಳಿಪುರ ಸಿಗ್ನಲ್ ಫ್ರೀ ಅಷ್ಟ ಪಥದ ಕಾರಿಡಾರ್ ಈ ವರ್ಷದ ಕೊನೆಯೊಳಗೆ ಮುಗಿಯಬೇಕಿದೆ. ಇದರಿಂದ ರಾಜಾಜಿನಗರ ಕ್ಷೇತ್ರದ ನಾಗರಿಕರಿಗೆ ಅತಿಹೆಚ್ಚು ಅನುಕೂಲವಾಗಲಿದೆ.[ಜಯನಗರದ ಮೃತ್ಯುಕೂಪಕ್ಕೆ ಇನ್ನು ಮುಕ್ತಿ ಸಿಕ್ಕಿಲ್ಲ]
ಯೋಜನೆ ಅಂತಿಮವಾದರೆ ಬೆಂಗಳೂರು ನಾಗರಿಕರು ಹೇಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಕಾಣಬಹುದು ಎಂಬುದರ ಕಲ್ಪನೆಯನ್ನು ಬಿಜೆಪಿ ನಾಯಕ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.[ಮಹಾನಗರಕ್ಕೆ ವೇಷ ಹೊಂದಿಕೆಯಾಗ್ದಿದ್ರೆ ಅಷ್ಟೇ ಕತೆ!]
ಈ ಯೋಜನೆ ಅನುಷ್ಠಾನಕ್ಕೆ ಕಳೆದ 4 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ನಿಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬಹುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಹಾಗಾದರೆ ನೀವು ಯೋಜನೆಯ ರೂಪುರೇಷೆ ಮತ್ತು ಅದು ಅನುಷ್ಠಾನವಾದ ಮೇಲೆ ಸಿಗುವ ಲಾಭದ ಮೇಲೆ ಒಂದು ನೋಟ ಹರಿಸಿಕೊಂಡು ಬನ್ನಿ.....