ರಾಜ್ಯೋತ್ಸವಕ್ಕೆ 'ಸ್ವಲ್ಪ ಕನ್ನಡ ಬರುತ್ತೆ' ವಾಟ್ಸ್ ಅಪ್ ಗ್ರೂಪ್
ಬೆಂಗಳೂರು, ಡಿಸೆಂಬರ್ 26: ಇದೊಂದು ವಿಶಿಷ್ಟ ಕಾರ್ಯಕ್ರಮ. ಎಂಥವರಿಗೂ ಹೆಮ್ಮೆ ಮೂಡಿಸುವಂಥದ್ದು. ಅದೇನು ಕಾರ್ಯಕ್ರಮ ಅಂತೀರಾ? ಬೆಂಗಳೂರಿನ ಹ್ಯಾಪಿಯೆಸ್ಟ್ ಮೈಂಡ್ಸ್ ಕಂಪನಿಯಲ್ಲಿ ಈಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಿದ್ದೇವೆ. ಆಚರಣೆ ರೀತಿಯೇ ವಿಶಿಷ್ಟವಾಗಿತ್ತು. ಕನ್ನಡಿಗರು-ಕನ್ನಡೇತರರು ಸೇರಿ ಆಚರಿಸಿದ ಹಬ್ಬದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮ ಮಾಡಿದ್ದೆವು. ಅದರಲ್ಲಿ ಇನ್ನೂರೈವತ್ತು ಮಂದಿ ಭಾಗವಹಿಸಿದ್ದರು. ಇನ್ನು ವೇಷ-ಭೂಷಣ ಸ್ಪರ್ಧೆ ಅಂತ ಮಾಡಿ, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡ, ಒನಕೆ ಓಬವ್ವ ಮುಂತಾದ ಮಹನೀಯರ ವೇಷ ಧರಿಸಿದ್ದರು. ಅಷ್ಟೇ ಅಲ್ಲ, ಈ ಮಹನೀಯರ ಕೊಡುಗೆಯನ್ನು ತಿಳಿಸಲಾಯಿತು. 'ಕನ್ನಡ ಸ್ವಲ್ಪ ಬರುತ್ತೆ' ಎಂದು ಹೆಸರಿಟ್ಟು, ವಾಟ್ಸಪ್ ಗುಂಪೊಂದನ್ನು ಮಾಡಲಾಯಿತು.[ಕತಾರ್ ರಾಜ್ಯೋತ್ಸವಕ್ಕೆ ರಂಗು ತಂದ ರಂಗೇಗೌಡ, ಶಿವಣ್ಣ]
ನಾಡಗೀತೆ ಹಾಡುವ ಸ್ಪರ್ಧೆ, ನೃತ್ಯ, ಬಬ್ರುವಾಹನ ಸಿನಿಮಾ ಸಂಭಾಷಣೆ ಹೇಳುವ ಸ್ಪರ್ಧೆ, ಒಂದು ನಿಮಿಷಗಳ ಕಾಲ ಕರ್ನಾಟಕದ ವಿವಿಧೆಡೆ ಮಾತನಾಡುವ ಕನ್ನಡ ಶೈಲಿಯಲ್ಲಿ ಸಂಭಾಷಣೆ ಹೇಳೋದು, ಹಾಸ್ಯ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು.