ಬಡತನ ಮೆಟ್ಟಿ ನಿಂತು ಜೆಇಇ ಪರೀಕ್ಷೆ ಪಾಸಾದ ಆಂಜಿನಪ್ಪ
ಬೆಂಗಳೂರು, ಜೂನ್ 12: ಇದು ಜೆಇಇ ಪರೀಕ್ಷೆ ಪಾಸಾದ ಹಳ್ಳಿ ಹೈದ ಆಂಜಿನಪ್ಪ ಯಶಸ್ಸಿನ ಕಥೆ. ಬೆಂಗಳೂರಿನ ಆನೇಕಲ್ ತಾಲೂಕಿನ ಕಟ್ಟನಹಳ್ಳಿ ಆಂಜಿನಪ್ಪನ ಊರು. ಮನೆಯಲ್ಲಿ ಕಡು ಬಡತನ; ತಂದೆ ಬೇರೆ ಇಲ್ಲ. ಇದರ ಮಧ್ಯೆಯೂ ಓದಿ ಯಶಸ್ಸು ಸಾಧಿಸಿದವರು ಆಂಜಿನಪ್ಪ.
ಮನೆಯಲ್ಲಿ ಓದಲು ಕಷ್ಟವಿದ್ದಾಗ ಇವರ ಸಹಾಯಕ್ಕೆ ಬಂದಿದ್ದು ರಾಷ್ಟ್ರೋತ್ಥಾನ ಪರಿಷತ್ ನ 'ತಪಸ್' ಯೋಜನೆ. ಇದರ ಪ್ರಯೋಜನ ಪಡೆದ ಆಂಜಿನಪ್ಪ ಪಿಯುಸಿಯಲ್ಲಿ ಶೇಕಡಾ 95.5% ಅಂಕಗಳನ್ನು ಪಡೆದಿದ್ದಾನೆ. ಮಾತ್ರವಲ್ಲ ಸಿಇಟಿಯಲ್ಲಿ 119 ನೇ ರ್ಯಾಂಕ್ ಹಾಗೂ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 32ನೇ ರ್ಯಾಂಕ್ ಮತ್ತು ಅಡ್ವಾನ್ಸ್ಡ್ ನಲ್ಲಿ 91 ರ್ಯಾಂಕ್ ಪಡೆದಿದ್ದಾನೆ.
ಈತನ ಸಾಹಸದ ಕಥೆಯನ್ನು ಬಿಜೆಪಿ ನಾಯಕ ಸುರೇಶ್ ಕುಮಾರ್ ತಮ್ಮ ಪೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ಆಂಜಿನಪ್ಪ ಯಶಸ್ಸಿನ ಕಥೆಯನ್ನು ಸುರೇಶ್ ಕುಮಾರ್ ಭಾಷೆಯಲ್ಲೇ ಓದಿ..
Comments
English summary
Rajajinagar MLA S Suresh Kumar shared a success story of the student who got 32nd rank in JEE Mains from Anekal, Benagaluru and it’s winning hearts in Facebook.
Story first published: Monday, June 12, 2017, 17:52 [IST]