ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿ ಹಾವಳಿ: 4 ವರ್ಷದ ಮಗು ಮೇಲೆ ದಾಳಿ
ಬೆಂಗಳೂರು, ಆಗಸ್ಟ್ 30: ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಪುಟ್ಟ ಬಾಲಕನ ಮೇಲೆ 10ಕ್ಕಿಂತ ಹೆಚ್ಚು ಬೀದಿನಾಯಿಗಳು ದಾಳಿ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ನಾಲ್ಕು ವರ್ಷದ ಬಾಲಕ ಪ್ರವೀಣ್ ದಾಳಿಗೆ ಒಳಗಾದ ಬಾಲಕ, ಬುಧವಾರ ಸಂಜೆ ಬಾಲಕ ಆಟವಾಡುತ್ತಿರುವಾಗ ನಾಯಿಗಳು ದಾಳಿ ಮಾಡಿವೆ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮುರುಗಮ್ಮ ಮತ್ತು ಮನೋಜ್ ದಂಪತಿ ಪುತ್ರ ಪ್ರವೀಣ್, ತೀವ್ರ ಗಾಯಗೊಂಡಿರುವ ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ : ಬೀದಿನಾಯಿಗಳ ದಾಳಿಗೆ ಬಾಲಕ ಬಲಿ
ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಷಕರು ದೂರು ದಾಖಲಿಸಿದ್ದಾರೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ, ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಬಿಬಿಎಂಪಿ ವಿಫಲವಾಗಿದೆ.
ಗ್ರಾ.ಪಂ ಅಧ್ಯಕ್ಷರ ಮಗಳ ಮೇಲೆ ಬೀದಿನಾಯಿಗಳ ದಾಳಿ
ಪ್ರತಿ ವರ್ಷವು ಬೀದಿನಾಯಿಗಳ ದಾಳಿಗೆ ಸಾಕಷ್ಟು ಮಕ್ಕಳು ಬಲಿಯಾಗುತ್ತಿದ್ದಾರೆ. ಶಾಲೆಗಳ ಬಳಿ ನಿತ್ಯ ಸಾಕಷ್ಟು ಬೀದಿ ನಾಯಿಗಳು ಇರುವುದನ್ನು ನಾವು ನೋಡುತ್ತೇವೆ ಅವು ಮಕ್ಕಳ ಮೇಲೆಯೇ ದಾಳಿ ಮಾಡುವುದು ಹೆಚ್ಚು. ಇದರಿಂ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.