ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಒಂದೇ ವೇದಿಕೆಯಲ್ಲಿ!
ಬೆಂಗಳೂರು, ಫೆಬ್ರವರಿ 01 : ಒಂದೇ ವೇದಿಕೆಯಲ್ಲಿ ನಡೆಯಲಿದೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ- ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಗಳು ಒಂದೇ ವೇದಿಕೆಯಲ್ಲಿ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಿರ್ವಹಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
5 ವರ್ಷ ಅವಧಿಯಲ್ಲಿ ಪ್ರಗತಿ 10 ಮತ್ತು ಪ್ರಗತಿ 12 ಯೋಜನೆ ಜಾರಿಗೆ 33.5 ಕೋಟಿ ರೂ. ವೆಚ್ಚ ಮಾಡಲು ಒಪ್ಪಿಗೆ ನೀಡಲಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಿಂದಲೇ ಈ ಹಣ ಭರಿಸುವ ಕಾರಣ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
2017-18ನೇ ಸಾಲಿನ SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
ಪ್ರಗತಿ ಯೋಜನೆ ಉಪಯೋಗವೇನು: ಆನ್ ಲೈನ್ ಮೂಲಕ ದತ್ತಾಂಶ ಪಡೆಯುವ ಕಾರಣ ದೋಷ ಕಡಿಮೆ ಇರುತ್ತದೆ, ಇ-ಪ್ರಶ್ನೆಗಳ ಬ್ಯಾಂಕ್ ರೂಪಿಸಿ ಅದರಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ. ನೀಡಿದ, ಬಳಸಿದ, ಬಳಕೆಯಾಗದ, ಹಾನಿಯಾದ ಉತ್ತರ ಪತ್ರಿಕೆಗಳ ದಾಸ್ತಾನಿಗೆ ಸರಳೀಕೃತ ಮೇಲ್ವಿಚಾರಣೆ, ಪರೀಕ್ಷಾ ಕೇಂದ್ರಗಳ ನಿಗದಿ , ಮಂಜೂರಾತಿ ನೀಡಲು ಸರಳ, ಗೌಪ್ಯ ವ್ಯವಸ್ಥೆ, ಆನ್ ಲೈನ್ ನಲ್ಲಿ ಮೌಲ್ಯಮಾಪಕರ ಪಟ್ಟಿ ಲಭ್ಯತೆ, ಯಾವಮೌಲ್ಯಮಾಪಕರಿಗೆ ಯಾವ ಪತ್ರಿಕೆ ಲಭಿಸಲಿದೆ ಎಂಬುದು ಗೌಪ್ಯವಾಗಿರಲಿದೆ.