ಏಪ್ರಿಲ್ 18ರಿಂದ 28ರ ತನಕ ಉತ್ತರಾದಿ ಮಠದಲ್ಲಿ ವಿಶೇಷ ಕಾರ್ಯಕ್ರಮ
ಬೆಂಗಳೂರು, ಏಪ್ರಿಲ್ 14 : ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಜನ್ಮ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ವೈಶಾಖ ಮಾಸದ ವಿಶೇಷ ಕಾರ್ಯಕ್ರಮಗಳನ್ನು ಬಸವನಗುಡಿಯಲ್ಲಿರುವ ದಿಗ್ವಿಜಯ ಲಕ್ಷ್ಮೀನರಸಿಂಹ ದೇವರ ಸನ್ನಿಧಾನದಲ್ಲಿ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 18ರ ಬುಧವಾರ ಅಕ್ಷಯ ತೃತೀಯ ಕಾರ್ಯಕ್ರಮ
ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನೀರು, ಮಜ್ಜಿಗೆ ಹಾಗೂ ಪಾನಕ ವಿತರಣೆ
ಬೆಳಗ್ಗೆ 8ರಿಂದ 10ರ ವರೆಗೆ ಸಾಮೂಹಿಕ ಗಾಯತ್ರಿ ಜಪ ಹಾಗೂ ರಾಮಕೃಷ್ಣ ಮಂತ್ರ ಜಪ
ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮೂಲರಾಮದೇವರ ಪೂಜೆ
ಮಧ್ಯಾಹ್ನ 12.30ಕ್ಕೆ ತೀರ್ಥ ಪ್ರಸಾದ
ಬೆಂಗಳೂರಿನ ಉತ್ತರಾಧಿಮಠದಲ್ಲಿ 'ಹರಿದಾಸ ಹಬ್ಬ'
ಏಪ್ರಿಲ್ 21ರ ಶನಿವಾರ
ಸತ್ಯಾತ್ಮ ತೀರ್ಥರ 23ನೇ ಪೀಠಾರೋಹಣ ಮಹೋತ್ಸವ
ಬೆಳಗ್ಗೆ 7ರಿಂದ ಬೆಳಗ್ಗೆ 10ರ ತನಕ ವಿದ್ವಾಂಸರಿಂದ ಸರ್ವಮೂಲ ಪಾರಾಯಣ
ಬೆಳಗ್ಗೆ 9ರಿಂದ ಬೆಳಗ್ಗೆ 10ರ ತನಕ ಬಾಲರಿಂದ ಬಾಲಗೋಪಾಲನ ಪ್ರಾರ್ಥನೆ
ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರ ತನಕ ಮೂಲರಾಮದೇವರ ಮಹಾಪೂಜೆ
ಮಧ್ಯಾಹ್ನ 12.30ಕ್ಕೆ ತೀರ್ಥಪ್ರಸಾದ
ಸಂಜೆ 6.30ರಿಂದ ರಾತ್ರಿ 8.30 ಸತ್ಯಾತ್ಮ ತೀರ್ಥರಿಂದ ಮೇಣೆಯ ಮೆರವಣಿಗೆ
ಏಪ್ರಿಲ್ 22ರಿಂದ ಏಪ್ರಿಲ್ 27ರ ವರೆಗೆ ಸಪ್ತರಾತ್ರೋತ್ಸವ ವಿಶೇಷ ಕಾರ್ಯಕ್ರಮ
ಸಂಜೆ 5.15ರಿಂದ 6ರ ವರೆಗೆ ವಿವಿಧ ಭಜನಾ ಮಂಡಳಿಯಿಂದ ಹರಿಭಜನೆ
ಸಂಜೆ 6ರಿಂದ ರಾತ್ರಿ 7.30 ವರೆಗೆ ಖ್ಯಾತ ಗಾಯಕರಿಂದ ಸಂಗೀತ ಸುಧಾ
22 ಸಿದ್ಧಾರ್ಥ ಬೆಳ್ಮಣ್ಣು
23 ವಿದ್ವಾನ್ ಶ್ರೀಕಂಠ ಭಟ್ಟ
24 ಪರಿಮಳಾ ಗಿರಿಯಾಚಾರ್
25 ಶೇಷಗಿರಿದಾಸ
26 ಪುತ್ತೂರು ನರಸಿಂಹ ನಾಯಕ
27 ಅನಂತ ಕುಲಕರ್ಣಿ
ರಾತ್ರಿ 7.30ರಿಂದ 8.15ರವರೆಗೆ
ಶ್ರೀಪಾದಂಗಳವರಿಂದ ಅಮೃತೋಪದೇಶ
ರಾತ್ರಿ 8.15ರಿಂದ 9.30ರವರೆಗೆ ರಾಜಬೀದಿಯಲ್ಲಿ ವಾಹನೋತ್ಸವ
22 ಅಶ್ವವಾಹನ
23 ಗಜವಾಹನ
24 ಶೇಷವಾಹನ
25 ಗರುಡವಾಹನ
27 ವಾಯುವಾಹನ
ಏಪ್ರಿಲ್ 28ರ ಶನಿವಾರ ನರಸಿಂಹ ಜಯಂತಿ
ಬೆಳಗ್ಗೆ 6.30ರಿಂದ ಬೆಳಗ್ಗೆ 9.30 ನರಸಿಂಹ ಮಹಾಮಂತ್ರ ಹೋಮ
ಬೆಳಗ್ಗೆ 7.30ರಿಂದ ಬೆಳಗ್ಗೆ 9.30 ಮೂಲರಾಮದೇವರ ಮಹಾ ಪೂಜೆ
ಬೆಳಗ್ಗೆ 9.30ರಿಂದ ಬೆಳಗ್ಗೆ 10.30 ನರಸಿಂಹ ದೇವರಿಗೆ ಮಹಾ ಪಂಚಾಮೃತ
ಬೆಳಗ್ಗೆ 11ರಿಂದ ಮಧ್ಯಾಹ್ನ 12.30 ಮಹಾರಥೋತ್ಸವ
ಮಧ್ಯಾಹ್ನ 1 ಗಂಟೆಗೆ ತೀರ್ಥ- ಪ್ರಸಾದ
ಸಂಜೆ 5ರಿಂದ 6 ಗಂಟೆ 1008 ಸಲ ನರಸಿಂಹ ಸುಳಾದಿ ಪಾರಾಯಣ
ಸಂಜೆ 6.30ರಿಂದ ನೃಸಿಂಹಾವತಾರ ವರ್ಣನೆ, ಮಹಾಮಂಗಳಾರತಿ