ಸೌಜನ್ಯ ಪ್ರಕರಣ: ಸಿಬಿಐ ತನಿಖೆ ಕುರಿತು ಹೈಕೋರ್ಟ್ ಅಸಮಾಧಾನ
ಬೆಂಗಳೂರು, ಏಪ್ರಿಲ್ 09: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂಬಂಧ ಸಿಬಿಐ ತನಿಖೆ ಬಗ್ಗೆ ಹೈಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ಸೌಜನ್ಯ ಪ್ರಕರಣ: ಹೆಚ್ಚಿನ ತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ
ದೋಷಾರೋಪ
ಪಟ್ಟಿಯಲ್ಲಿ
ಸಾಕ್ಷ್ಯಗಳ
ಹೇಳಿಕೆ
ದಾಖಲಿಸದಿರುವುದಕ್ಕೆ
ಕಾರಣವೇನೆಂದು
ತನಿಖಾಧಿಕಾರಿಗಳಿಂದ
ಮಾಹಿತಿ
ಪಡೆದು
ಕೋರ್ಟ್ಗೆ
ಒದಗಿಸುವಂತೆ
ಸಿಬಿಐ
ಪರ
ವಕೀಲರಿಗೆ
ಹೈಕೋರ್ಟ್
ಸೂಚಿಸಿದೆ.
2012
ರ
ಅ.
9
ರಂದು
ಸಂಜೆ.
ಕಾಲೇಜಿನಿಂದ
ಮನೆಗೆ
ಹೊರಟ
ಧರ್ಮಸ್ಥಳ
ಕ್ಷೇತ್ರದ
ಬಳಿಯ
ಪಾಂಗಾಳದ,
ಚಂದಪ್ಪ
ಗೌಡ
ಕುಸುಮಾವತಿ
ದಂಪತಿ
ಪುತ್ರಿ
ಸೌಜನ್ಯಾ
(17)
ಮನೆಗೆ
ಹೋಗಲೇ
ಇಲ್ಲ.
ರಾತ್ರಿಯಾದರೂ
ಮನೆಗೆ
ಬಾರದ
ಪುತ್ರಿಯನ್ನು
ಮನೆಯವರು
ರಾತ್ರಿಯಿಡೀ
ಹುಡುಕಿದರೂ
ಸಿಗಲಿಲ್ಲ.
ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಅನತಿ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತು.
ಮನೆಯಲ್ಲಿನ ಹೊಸ ಅಕ್ಕಿ ಊಟವನ್ನು ನೆನೆದುಕೊಂಡು ಹೊರಟಿದ್ದ ಬಾಲೆ ದುರುಳರ ಕಾಮಪಿಪಾಸೆಗೆ ಬಲಿಯಾಗಿದ್ದಳು. ಅರ್ಜಿಯ ವಿಚಾರಣೆಯನ್ನು ಕೋರ್ಟ್ ಏ.17ಕ್ಕೆ ಮುಂದೂಡಿದೆ. ಸೌಜನ್ಯ ಅವರ ತಂದೆ ಪ್ರಕರಣದ ಮರು ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.