ನಾಚಿಕೆಗೇಡು! ಸದನದಲ್ಲಿ ಸಿಎಂ 'ನಿದ್ದೆ'ರಾಮಯ್ಯ ಆಗ್ತಾರೆ
ಬೆಂಗಳೂರು, ಜು.18: ಇತ್ತೀಗಷ್ಟೇ ಲೋಕಸಭೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನಿದ್ದೆಗೆ ಜಾರಿದ್ದು ಭಾರಿ ಚರ್ಚೆಗೀಡಾಗಿತ್ತು. ಈಗ ಕರ್ನಾಟಕದ ಅಸೆಂಬ್ಲಿಯಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಗಂಭೀರ ಚರ್ಚೆ ನಡುವೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರಾದೇವಿಗೆ ಶರಣು ಹೊಡೆದಿದ್ದು ರಾಷ್ಟ್ರಮಟ್ಟದ ಸುದ್ದಿಯಾಗಿದೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದಂತೆಯೇ ಬಿಜೆಪಿ-ಜೆಡಿಎಸ್ ಸದಸ್ಯರು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಖಂಡಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಆರಂಭಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಇಷ್ಟೊಂದು ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳದೇ ಕೈಗಟ್ಟಿ ಕುಳಿತಿದೆ ಎಂದು ಕಿಡಿಕಾರಿದರು.
ರಾಜ್ಯದ್ಯಂತ
ಮೇಲಿಂದ
ಮೇಲೆ
ಅತ್ಯಾಚಾರ
ಪ್ರಕರಣಗಳು
ನಡೆಯುತ್ತಿವೆ.
ವಿರೋಧ
ಪಕ್ಷಗಳು
ಪಕ್ಷಾತೀತವಾಗಿ
ಕಪ್ಪು
ಪಟ್ಟಿ
ಧರಿಸಿ
ಹೋರಾಟ
ನಡೆಸುತ್ತಿವೆ.
ನಿಯಮ
60ರಡಿಯಲ್ಲಿ
ಚರ್ಚೆಗೆ
ಬಿಜೆಪಿ
ಅವಕಾಶ
ಕೋರಿದೆ.
ಆದರೆ
ಇದನ್ನು
ನಿರಾಕರಿಸಿದ
ಮುಖ್ಯಮಂತ್ರಿ
ಮಾತ್ರ
ಸದನದಲ್ಲಿ
ಗಡದ್ದಾಗಿ
ನಿದ್ದೆಗೆ
ಜಾರಿದ್ದಾರೆ.
ರಾಜ್ಯಾದ್ಯಂತ
ಬಡೆಯುತ್ತಿರುವ
ಅತ್ಯಾಚಾರಗಳನ್ನು
ತಡೆಯಬೇಕಿದ್ದ
ಮುಖ್ಯಮಂತ್ರಿಯೇ
ಹೀಗೆ
ನಿದ್ರಾದೇವಿಗೆ
ಮೊರೆಹೋದದ್ದು
ಮಾತ್ರ
ದುರಾದೃಷ್ಟಕರ
ಎಂದು
ಬಿಜೆಪಿ
ಕಿಡಿಕಾರಿದೆ.
[ಅತ್ಯಾಚಾರ
ಪ್ರಕರಣ,
ಶುಕ್ರವಾರ
ಏನಾಯ್ತ?]
ಕಳೆದ ಒಂದು ವಾರದಲ್ಲಿ ರಾಜ್ಯದ ವಿವಿಧೆಡೆ ಸುಮಾರು 10 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 7 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಾಹಿತಿ ಕೇಳಿದೆ. ರಾಜ್ಯಾದ್ಯಂತ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲೇ ನಿದ್ದೆಗೆ ಜಾರಿರುವುದು ತೀವ್ರ ಖಂಡನೆಗೆ ಗುರಿಯಾಗಿದೆ.
ಗೃಹಸಚಿವರನ್ನು ಕೈಬಿಡಿ, ಅದಕ್ಷರನ್ನು ವರ್ಗಾಯಿಸಿ: ಆಮ್ ಆದ್ಮಿ ಪಕ್ಷದ ಆಗ್ರಹ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಡುತ್ತಿದೆ ಎಂದು ಇತ್ತೀಚಿನ ಪ್ರಕರಣಗಳು ಸಾಬೀತು ಮಾಡುತ್ತಿವೆ. ರಾಜ್ಯದ ಗೃಹ ಸಚಿವರಾಗಿರುವ ಕೆ.ಜೆ.ಜಾರ್ಜ್ ತೀರಾ ಅದಕ್ಷ ಸಚಿವರಾಗಿದ್ದು, ಅವರನ್ನು ಈ ಕೂಡಲೆ ಸಚಿವಸಂಪುಟದಿಂದ ಕೈಬಿಟ್ಟು ದಕ್ಷರಾದವರಿಗೆ ಗೃಹಖಾತೆಯನ್ನು ವಹಿಸಿಕೊಡಬೇಕೆಂದು ಆಮ್ ಆದ್ಮಿ ಪಕ್ಷ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಒತ್ತಾಯಿಸುತ್ತಿದೆ.
ಇತ್ತೀಚಿಗೆ
ಮಾರತ್ತಹಳ್ಳಿಯ
ವಿಬ್ಗಯಾರ್
ಅಂತಾರಾಷ್ಟ್ರೀಯ
ಶಾಲೆಯಲ್ಲಿ
ಮಗುವಿನ
ಮೇಲೆ
ನಡೆದಿದೆ
ಎನ್ನಲಾದ
ಅತ್ಯಾಚಾರ
ಪ್ರಕರಣ
ಮತ್ತು
ಯುವತಿಯನ್ನು
ಕಾರಿನಲ್ಲಿ
ಅಪಹರಿಸಿ
ಆಕೆಯ
ಮೇಲೆ
ಲೈಂಗಿಕ
ದೌರ್ಜನ್ಯ
ಎಸಗಲಾಗಿದೆ
ಎನ್ನುವ
ಪ್ರಕರಣದಲ್ಲಿ
ಪೋಲಿಸರು
ನಡೆದುಕೊಂದ
ಕ್ರಮ
ಮತ್ತು
ಈ
ಎಲ್ಲಾ
ಪ್ರಕರಣಗಳಿಗೆ
ರಾಜ್ಯ
ಸರ್ಕಾರ
ಸ್ಪಂದಿಸುತ್ತಿರುವ
ರೀತಿಯಿಂದಾಗಿ
ಜನಸಾಮಾನ್ಯರು
ಈ
ಸರ್ಕಾರದ
ಮೇಲೆ
ಸಂಪೂರ್ಣ
ವಿಶ್ವಾಸವನ್ನು
ಕಳೆದುಕೊಳ್ಳುತ್ತಿದ್ದಾರೆ.
Our
Chief
Minister
Sleeps
when
confronted
by
BJP
with
17
molestation
cases
in
10
days
across
the
state...
pic.twitter.com/Wo64GM8xJX
—
BJP
Karnataka
(@bjpkarnataka)
July
18,
2014
ಈ ಕೂಡಲೆ ಮುಖ್ಯಮಂತ್ರಿಗಳು ಎಚ್ಚತ್ತು ಗೃಹಮಂತ್ರಿಯನ್ನು ಬದಲಿಸಬೇಕು ಮತ್ತು ಭ್ರಷ್ಟಾಚಾರದಿಂದ ಗಳಿಸಿದ ಹಣ ಮತ್ತು ತಮ್ಮ ರಾಜಕೀಯ ಪ್ರಭಾವದಿಂದಾಗಿ ಹತ್ತಾರು ವರ್ಷಗಳಿಂದ ನಗರದಲ್ಲಿಯೇ ನೌಕರಿ ಮಾಡುತ್ತಿರುವ ಎಲ್ಲಾ ಪೋಲಿಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನಗರದಲ್ಲಿ ನಿಯೋಜನೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಸಿದ್ಧಾರ್ಥ ಶರ್ಮರವರು ಈ ಪತ್ರಿಕಾಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
Karnataka
CM
Siddaramaiah
caught
napping
during
a
debate
on
the
rising
incidents
of
crime
against
women
pic.twitter.com/SBS74Hz5WL
—
TIMES
NOW
(@timesnow)
July
18,
2014