ರಾಜ್ಯದ ಅಕ್ರಮ ಗಣಿಗಾರಿಕೆ ತನಿಖೆ ಎಸ್ಐಟಿ ಹೆಗಲಿಗೆ
ರಾಜ್ಯದ ಏಳು ಅಕ್ರಮ ಗಣಿಗಾರಿಕೆ ಪ್ರಕರಣಗಳು ಎಸ್ ಐಟಿ ಹೆಗಲಿಗೆ. ರಾಜ್ಯ ಸಚಿವ ಸಂಪುಟದ ನಿರ್ಧಾರ. ಲೋಕಾಯುಕ್ತ ನೀಡಿದ್ದ 2 ವರದಿಯಲ್ಲಿನ ಪ್ರಕರಣಗಳು ಎಸ್ ಐಟಿಗೆ. ಜಂತಕಲ್ ಮೈನಿಂಗ್ ಕೂಡಾ ಎಸ್ ಐಟಿಗೆ ವರ್ಗಾವಣೆ.
ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಈವರೆಗೆ ನಡೆದಿರುವ ಎಲ್ಲಾ ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ವಹಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಅಕ್ರಮ ಗಣಿಗಾರಿಕೆ ತನಿಖೆಗೆ ಸರ್ಕಾರ ಮುಂದಾಗಿದ್ದು 'ಸಂತೋಷ' (ಸಂದರ್ಶನ)
ಬುಧವಾರ ಸಂಜೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ, ಲೋಕಾಯುಕ್ತ ಸಂಸ್ಥೆಯು ನೀಡಿದ್ದ 2 ವರದಿಗಳಲ್ಲಿನ ಎಲ್ಲಾ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಎಸ್ ಐಟಿಗೆ ವಹಿಸಲು ನಿರ್ಧರಿಸಲಾಗಿದೆ.
ವರದಿ ಸೋರಿಕೆಯಾಗಿದೆ ನಿಜ, ಕ್ಷಮಿಸಿ: ಲೋಕಾಯುಕ್ತ ಹೆಗ್ಡೆ
7 ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಎಸ್ಐಟಿಗೆ ವಹಿಸಲು ನಿರ್ಧರಿಸಲಾಯಿತು. ಇದರಲ್ಲಿ, ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣವೂ ಸೇರಿದೆ.
Comments
sit karnataka illegal mining lokayuktha government of karnataka cabinet ವಿಶೇಷ ತನಿಖಾ ದಳ ಎಸ್ ಐಟಿ ಕರ್ನಾಟಕ ಅಕ್ರಮ ಗಣಿಗಾರಿಕೆ ಲೋಕಾಯುಕ್ತ ಕರ್ನಾಟಕ ಸರ್ಕಾರ ಸಚಿವ ಸಂಪುಟ
English summary
All illegal mining cases which were mentioned earlier by Karnataka Lokayuktha, will be investigated by Special Investigating Team (SIT) of Karnataka. The Cabinet of Karnataka took the decision in this regard on July 12, 2017.