ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಜೆಪಿಯವರು ಮೊದಲು ಅವರನ್ನು ರಕ್ಷಣೆ ಮಾಡಿಕೊಳ್ಳಬೇಕು'

|
Google Oneindia Kannada News

ಬೆಂಗಳೂರು, ಮಾರ್ಚ್ 02 : 'ಬೆಂಗಳೂರನ್ನು ಹಾಳು ಮಾಡಿದ್ದು ಬಿಜೆಪಿಯವರು. ಮೊದಲು ಅವರನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಯನ್ನು ವ್ಯಂಗ್ಯವಾಡಿದರು.

ಮಾಫಿಯಾ ರಾಜ್ ಕಿತ್ತು ಬಿಸಾಡುತ್ತೇವೆ : ಅನಂತ್ ಕುಮಾರ್ಮಾಫಿಯಾ ರಾಜ್ ಕಿತ್ತು ಬಿಸಾಡುತ್ತೇವೆ : ಅನಂತ್ ಕುಮಾರ್

ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, 'ಬೆಂಗಳೂರು ನಗರ ಗಾರ್ಡನ್ ಸಿಟಿಯಾಗಿತ್ತು ಅದನ್ನು ಹಾಳು ಮಾಡಿದವರು ಬಿಜೆಪಿ. ಕೆರೆಗಳನ್ನು ಹಾಳು ಮಾಡಿದವರು ಬಿಜೆಪಿಯವರೇ, ಬಿಬಿಎಂಪಿ ಆಸ್ತಿಗಳನ್ನು ಅಡಮಾಡ ಇಟ್ಟವರು ಅವರೇ. ಪಾದಯಾತ್ರೆಯಲ್ಲಿ ಇವೆಲ್ಲವನ್ನು ಅವರು ಜನರ ಮುಂದಿಡಬೇಕು' ಎಂದು ಹೇಳಿದರು.

bjp

'ಬಿಜೆಪಿಯವರು 5 ವರ್ಷ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದರು. ಆಗ ಬಿಬಿಎಂಪಿ ಫೈಲ್ ಗಳನ್ನೆಲ್ಲ ಸುಟ್ಟು ಹಾಕಿದವರು ಯಾರು?. ನೈಟ್ ಟೆಂಡರ್ ಕರೆದವರು ಯಾರು?. ಎಷ್ಟೋ ಫೈಲ್ ಗಳನ್ನು ಹಾಗೇ ಉಳಿಸಿದವರು ಯಾರು?. ಪಾಲಿಕೆ ಆಸ್ತಿಗಳನ್ನು ಅಡ ಇಟ್ಟವರು ಯಾರು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

In Pics : ರಾಜ್ಯ ಸರಕಾರದ ವಿರುದ್ಧ ಬೆಂಗಳೂರು ರಕ್ಷಿಸಿ ಪಾದಯಾತ್ರೆ

'ಬಿಬಿಎಂಪಿಗೆ ಬಿಜೆಪಿಯವರು 110 ಹಳ್ಳಿಗಳನ್ನು ಸೇರಿಸಿದರು. ಈ ಹಳ್ಳಿಗಳಿಗೆ ನೀರು ಕೊಟ್ಟರೇ?, ರಸ್ತೆ ಕೊಟ್ಟರೇ? ಇದನ್ನೆಲ್ಲ ಬಿಜೆಪಿಯವರು ಜನರಿಗೆ ಹೇಳಬೇಕು ಅಲ್ವಾ?. ಪಾದಯಾತ್ರೆ ಮಾಡೋರು ಜನರಿಗೆ ಸತ್ಯ ಹೇಳಬೇಕು. ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡುವುದಲ್ಲ' ಎಂದರು.

ಬಿಜೆಪಿ ಪಾದಯಾತ್ರೆ ಆರಂಭ, ಟ್ರಾಫಿಕ್ ಜಾಮ್ ಎದುರಿಸಿಬಿಜೆಪಿ ಪಾದಯಾತ್ರೆ ಆರಂಭ, ಟ್ರಾಫಿಕ್ ಜಾಮ್ ಎದುರಿಸಿ

English summary
Kanataka Chief Minister Siddaramaiah verbally attacked Bharatiya Janata Party for their Save Bengaluru campaign. BJP on Friday, March 02 started the campaign, 14-day campaign will cover all assembly constituencies of Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X