ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಎಂ ಗರಂ
ಬೆಳಗಾವಿ, ಡಿ. 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಸಿಎಂ ಕೋಪಕ್ಕೆ ಕಾರಣವಾಗಿದೆ. ಬಿಬಿಎಂಪಿಯಲ್ಲಿ ಪ್ರಸಕ್ತ ಸಾಲಿನ ಡಿಸೆಂಬರ್ವರೆಗೆ 1406 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿ
ಗುರುವಾರ
ವೈ.
ಎ.
ನಾರಾಯಣ
ಸ್ವಾಮಿ
ಅವರ
ಪ್ರಶ್ನೆಗೆ
ಉತ್ತರ
ನೀಡಿದ
ಸಿದ್ದರಾಮಯ್ಯ
ಅವರು,
ಕಳೆದ
ಸಾಲಿನಲ್ಲಿ
1323
ಕೋಟಿ
ರೂ
ತೆರಿಗೆ
ಸಂಗ್ರಹಿಸಲಾಗಿತ್ತು.
ಈ
ವರ್ಷ
ತೆರಿಗೆ
ಸಂಗ್ರಹ
ದ್ವಿಗುಣಗೊಳ್ಳಲಿದೆ.
ಆರ್ಥಿಕ
ವರ್ಷಾಂತ್ಯಕ್ಕೆ
2900
ಕೋಟಿ
ರೂ
ತೆರಿಗೆ
ಸಂಗ್ರಹದ
ಗುರಿ
ಹೊಂದಲಾಗಿದೆ
ಎಂದರು.
[ಅಧಿಕಾರಿಗಳ
ವಿರುದ್ಧ
ಸಿದ್ದರಾಮಯ್ಯ
ಗರಂ]
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆ ವಸೂಲಿಯಲ್ಲಿ ಹಿಂದೆ ಉಳಿದಿದೆ. ಪಾಲಿಕೆಯ ಅಧಿಕಾರಿಗಳು ಎಂದೂ ತೆರಿಗೆ ಸಂಗ್ರಹಕ್ಕೆ ನೀಡಿದ ಗುರಿಯನ್ನು ಮುಟ್ಟಿಲ್ಲ ಎಂದು ಸಿಎಂ ಹೇಳಿದರು. ಪಾಲಿಕೆ ವ್ಯಾಪ್ತಿಯ 16 ಲಕ್ಷ ಆಸ್ತಿಗಳಿದ್ದು, ಕೇವಲ 14 ಲಕ್ಷ ಆಸ್ತಿಗಳಿಂದ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು. [ಮುಜರಾಯಿ ಶಾಲೆಗಳು ಶಿಕ್ಷಣ ಇಲಾಖೆಗೆ]
2 ಲಕ್ಷ ಆಸ್ತಿಗಳಿಗೆ ತೆರಿಗೆ ವಿಧಿಸಿರುವುದಿಲ್ಲ. ಮಾಲೀಕತ್ವ ಮತ್ತು ಇತರ ಗೊಂದಲಗಳಿಂದ ತೆರಿಗೆ ವಸೂಲಿ ಮಾಡುತ್ತಿಲ್ಲ. ಆದರೆ ಈ ಆಸ್ತಿಗಳಿಗೆ ರಸ್ತೆ, ನೀರು, ಒಳಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ನಿರ್ದೇಶನ ನೀಡಿ, ಎಲ್ಲಾ ಆಸ್ತಿಗಳಿಗೆ ತೆರಿಗೆ ವಿಧಿಸುವಂತೆ ಸೂಚಿಸಲಾಗಿದೆ ಎಂದರು.
ಬಿಬಿಎಂಪಿ ಸದಸ್ಯರ ಅಭಿಪ್ರಾಯದಂತೆ ತೆರಿಗೆ ಸಂಗ್ರಹ ಕುರಿತಂತೆ ಹೊಸ ತಂತ್ರಾಂಶ ಅಭಿವೃದ್ಧಿ ಒಳಗೊಂಡಂತೆ ತೆರಿಗೆ ಸಂಗ್ರಹ ಸುಧಾರಣೆಗಾಗಿ ತಜ್ಞರನ್ನೊಳಗೊಂಡ ಸಮಿತಿ ರಚಿಸಲು ಪರಿಶೀಲಿಸಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು.
ಹಿಂದೆಯೂ ಗುಡುಗಿದ್ದರು : ಕೆಲವು ದಿನಗಳ ಹಿಂದೆಯೂ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗುಡುಗಿದ್ದರು. ಜನರು ಸಣ್ಣ ತಪ್ಪುಗಳಿಗೆ ಕೋರ್ಟ್ಗೆ ಹೋಗುವುದಿಲ್ಲ, ಆದ್ದರಿಂದ ಅಧಿಕಾರಿಗಳಿಗೆ ಭಯವಿಲ್ಲ. ತಪ್ಪುಗಳನ್ನು ಮಾಡುತ್ತಲೇ ಇದ್ದೀರಿ' ಎಂದು ಮುಖ್ಯಮಂತ್ರಿಗಳು ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದರು.