ಉಚಿತ ಬಸ್ಪಾಸ್ ವಾಪಸಾತಿ ವಿರೋಧಿಸಿ ಎಸ್ಎಫ್ಐ ಪ್ರತಿಭಟನೆ
ಬೆಂಗಳೂರು, ಜೂನ್ 15: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಎಸ್ಎಫ್ಐ ಸಂಘಟನೆ ಕೆಎಸ್ಆರ್ಟಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಕಳೆದ ಹತ್ತು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ, ಹಿಂದಿನ ಕಾಂಗ್ರೆಸ್ ಸರ್ಕಾರ ಕಳೆದ ಬಾರಿ ಮಂಡಿಸಿದ ಬಜೆಟ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೆ ಉಚಿತ ಬಸ್ ನೀಡುವುದಾಗಿ ಘೋಷಿಸಿತ್ತು ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ.
ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗಷ್ಟೇ ಉಚಿತ ಬಸ್ ಪಾಸ್!
ಆದರೆ ಹೊಸದಾಗಿ ಅಧಿಕಾರಕ್ಕೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ - ಜೆಡಿಸ್ ಸಮ್ಮಿಶ್ರ ಸರ್ಕಾರ ಉಚಿತ ಬಸ್ ಪಾಸ್ ಯೋಜನೆಯನ್ನು ರದ್ದು ಪಡಿಸಿ ಪೂರ್ಣ ಪ್ರಮಾಣದ ಹಣ ನೀಡಿ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುವಂತೆ ಆದೇಶ ಹೊರಡಿಸಿದ್ದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ.
ಬೇರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಸುಲಭ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದೆ. ಕೇರಳದಲ್ಲಿ ನಾಲ್ಕು ರೂ ಬಸ್ ಚಾರ್ಜ ಇದ್ದರೆ 1 ರೂ ಮಾತ್ರ ವಿದ್ಯಾರ್ಥಿಗಳು ನೀಡಬೇಕು.
ಹರ್ಯಾಣ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಲಾಗುತ್ತಿದೆ. ಹಾಗಾಗಿ ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯದಲ್ಲಿಯೂ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಉಲ್ಟಾ ಹೊಡೆದ ಕುಮಾರಸ್ವಾಮಿ
ವಿದ್ಯಾರ್ಥಿಗಳು ಬಸ್ ಗಳಲ್ಲಿ ಓಡಾಡುವಾಗ ಅನೇಕ ಸಮಸ್ಯೆಗಳನ್ನು ಎದಿರುಸಿತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅಂತರ್ ರಾಜ್ಯ ಬಸ್ ಎಂದು ವಿದ್ಯಾರ್ಥಿಗಳು ಬಸ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ- ಕಾಲೇಜು ಸಮಯಕ್ಕನುಸಾರವಾಗಿ ಬಸ್ ಗಳ ಕೊರತೆ ಇದೆ. ಹಾಗಾಗಿ ಉಚಿತ ಬಸ್ ಪಾಸ್ ಯೋಜನೆ ಸೇರಿದಂತೆ ಸಮಗ್ರ ಸಾರಿಗೆ ಸಂಪರ್ಕ ಅಭಿವೃದ್ಧಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಈ ಕೆಳಗಿನ ಬೇಡಿಕೆಗಳನ್ನು ಒತ್ತಾಯಿಸಿದರು.
ಬೇಡಿಕೆಗಳು
1)
ಎಲ್,ಕೆ,ಜಿ
ಯಿಂದ
ಉನ್ನತ
ಶಿಕ್ಷಣದವರೆಗೆ
ಎಲ್ಲಾ
ವಿದ್ಯಾರ್ಥಿಗಳಿಗೆ
ಉಚಿತ
ಬಸ್
ಪಾಸ್
ನೀಡಬೇಕು.
ಇದನ್ನು
ಖಾಸಗಿ
ವ್ಯಕ್ತಿಗಳಿಗೂ
ವಿಸ್ತರಿಸಿ,
2)
ಅಗತ್ಯವಿರುವ
ವಿದ್ಯಾರ್ಥಿಗಳಿಗೆ
ಬಸ್
ಪಾಸ್
ದೂರದ
ಮಿತಿಯನ್ನು
60
ಕಿ.ಮೀ
ಬದಲಿಗೆ
100
ಕಿ.ಮೀ
ಹೆಚ್ಚಿಸಬೇಕು.
3)
ಗ್ರಾಮೀಣ
ಪ್ರದೇಶದಲ್ಲಿ
ಬಸ್
ಸಂಪರ್ಕ
ಇಲ್ಲದೆ
ಪರದಾಡುವಂತಾಗಿದೆ
ಹಾಗಾಗಿ
ವಿದ್ಯಾರ್ಥಿಗಳ
ಅಗತ್ಯಕ್ಕನುಸಾರವಾಗಿ
ಸಾರಿಗೆ
ಸಂಪರ್ಕ
ಕಲ್ಪಿಸಬೇಕು.
4)
ಅಂತರ್
ರಾಜ್ಯ
ಬಸ್
ಎಂಬ
ಬೇಧ
ಮಾಡದೆ
ಎಲ್ಲಾ
ಬಸ್
ಗಳಲ್ಲಿ
ಪ್ರಯಾಣಿಸಲು
ಅವಕಾಶ
ನೀಡಬೇಕು.
5)
ಬಸ್
ಗಳಲ್ಲಿ
ವಿನಾ
ಕಾರಣ
ವಿದ್ಯಾರ್ಥಿಗಳನ್ನು
ಅವಮಾನಿಸುವ
ನಿರ್ವಾಹಕ
ಮತ್ತು
ಚಾಲಕರ
ಮೇಲೆ
ಕ್ರಮ
ಜರುಗಿಸಬೇಕು.
6)
ಬಸ್
ನಿಲ್ದಾಣಕ್ಕಿಂತ
ಮುಂಚೆ
2
-3
ಕಿ.ಮಿ
ಕಾಲೇಜು
ಇರುವಂತೆ
ಪ್ರದೇಶಗಳಲ್ಲಿ
ವಿದ್ಯಾರ್ಥಿಗಳಿಗೆ
ಅನುಕೂಲವಾಗುವಂತೆ
ಬಸ್
ನಿಲ್ದಾಣದ
ವರೆಗೆ
ವಿಸ್ತರಿಸಬೇಕು.