ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ:ಲೈಂಗಿಕ ಕಿರುಕುಳ, ಯೋಧನ ಪತ್ನಿ ಆತ್ಮಹತ್ಯೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್‌ 1: ಲೈಂಗಿಕ ಕಿರುಕುಳ ತಾಳಲಾರದೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯೋಧನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ನಮ್ಮ ರಕ್ಷಣೆಗಾಗಿ ಯೋಧರು ದೇಶಕಾಯಲು ಹೋದರೆ ಇಲ್ಲಿ ಅವರ ಪತ್ನಿ, ಸಹೋದರಿಯರ ಗತಿ ಏನಾಗುತ್ತದೆ ಎಂದು ಒಮ್ಮೆ ಯೋಚನೆ ಮಾಡಲೇಬೇಕು. ನಮ್ಮ ಭದ್ರತೆಗಾಗಿ ಕುಟುಂಬ, ಸುಖ ಸಂತೋಷಗಳನ್ನು ತ್ಯಾಗ ಮಾಡಿ ಹೋಗುವಾಗ ಅವರ ಕುಟುಂಬದ ರಕ್ಷಣೆಯನ್ನು ಸುತ್ತಮುತ್ತಲಿನಲ್ಲಿರುವ ಜನರು ಮಾಡಬೇಕು. ಆದರೆ ವಿಪರ್ಯಾಸ ನೋಡಿ ಯಾರಿಗೂ ಬೇರೆಯವರನ್ನು ನೋಡಿಕೊಳ್ಳಲು ಪುರುಸೊತ್ತಿಲ್ಲ.

12 ವರ್ಷದ ಬಾಲಕಿ ಮೇಲೆ 7 ತಿಂಗಳಿಂದ ಅತ್ಯಾಚಾರ, 17 ಮಂದಿ ಬಂಧನ12 ವರ್ಷದ ಬಾಲಕಿ ಮೇಲೆ 7 ತಿಂಗಳಿಂದ ಅತ್ಯಾಚಾರ, 17 ಮಂದಿ ಬಂಧನ

ಕವಿತಾಳ ಗಂಡ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಆಕೆಗೆ 7 ವರ್ಷದ ಗಂಡು ಮಗು ಸಹ ಇದೆ. ಆದರೆ, ವಿಜಯಪುರ ನಿವಾಸಿ ಸಾಯಿಕೃಷ್ಣಮೂರ್ತಿ ಎಂಬುವವ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ಕವಿತಾ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆಗೆ ಸಂಬಂಧಪಟ್ಟಂತೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sexual harassment: woman commit suicide

ಮಹಿಳೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಮಹಿಳೆ ಕವಿತಾ ಮೃತರು. ಮಂಗಳವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಗಾಯಗಳಾಗಿದ್ದ ಕವಿತಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Wife of a soldier who fed up with sexual harassment by another person committed suicide burning herself at Vijayapura village in Devanahalli taluk. The deceased identified as Kavitha of 35 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X