ದೇಶ ವಿರೋಧಿ ಘೋಷಣೆ, ಬೆಂಗಳೂರು ಪೊಲೀಸರಿಂದ ಎಫ್ಐಆರ್
ಬೆಂಗಳೂರು, ಆಗಸ್ಟ್ 16 : ರಾಜದ್ರೋಹದ ಆರೋಪದಡಿ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಮತ್ತು ಕೆಲವು ಅಪರಿಚಿತರ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಆಗಸ್ಟ್ 13ರಂದು ದೇಶವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಆರೋಪವಿದೆ.
ಅಖಿಲ
ಭಾರತೀಯ
ವಿದ್ಯಾರ್ಥಿ
ಪರಿಷತ್
ಬೆಂಗಳೂರು
ಉತ್ತರ
ವಿಭಾಗದ
ಸಂಘಟನಾ
ಕಾರ್ಯದರ್ಶಿ
ಟಿ.ಜಯಪ್ರಕಾಶ್
ಅವರು
ಸಲ್ಲಿಸಿದ್ದ
ದೂರಿನ
ಅನ್ವಯ
ಎಫ್ಐಆರ್
ದಾಖಲು
ಮಾಡಲಾಗಿದೆ.
ಶಾಂತಿಭಂಗ,
ರಾಜದ್ರೋಹ,
ಧರ್ಮ,
ಜಾತಿ,
ಆಧಾರದ
ಮೇಲೆ
ಗುಂಪುಗಳ
ನಡುವೆ
ವೈಮನಸ್ಸು
ಸೃಷ್ಟಿ
ಆರೋಪದಡಿ
ಪ್ರಕರಣ
ದಾಖಲಾಗಿದೆ.[ಬೆಂಗಳೂರು
ಕಾಲೇಜಿನಲ್ಲಿ
ದೇಶ
ವಿರೋಧಿ
ಘೋಷಣೆ,
ಏನಿದು
ವಿವಾದ?]
ಬೆಂಗಳೂರಿನ ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆ ಆಗಸ್ಟ್ 13ರಂದು ಬ್ರೋಕನ್ ಫ್ಯಾಮಿಲೀಸ್ ಹೆಸರಿನಲ್ಲಿ ಕಾರ್ಯಾಗಾರ ಆಯೋಜಿಸಿತ್ತು. ಇದರಲ್ಲಿ ಸೇನೆ ಮತ್ತು ಕಾಶ್ಮೀರಿಗಳ ಸ್ಥಿತಿಗತಿ ಚರ್ಚಿಸಲು ವ್ಯವಸ್ಥೆ ಮಾಡಲಾಗಿತ್ತು.[JNU ಗಲಭೆ. 5 ಪ್ರಶ್ನೆಗಳು]
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವು ಯುವಕರು ದೇಶವಿರೋಧಿ ಘೋಷಣೆ ಕೂಗಿದ್ದಾರೆ. 'ಜಾನ್ ಸೇ ಲೇಂಗೆ ಆಜಾದಿ, ಕಾಶ್ಮೀರ್ ಸೇ ಲೇಂಗೇ ಆಜಾದಿ' ಮುಂತಾದ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪವಿದೆ. ಆದರೆ, ಘೋಷಣೆಗಳನ್ನು ಕೂಗಿದವರು ಯಾರು? ಎಂಬುದು ಇನ್ನೂ ಪತ್ತೆಯಾಗಿಲ್ಲ.[JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]
ದೇಶವಿರೋಧಿ ಘೋಷಣೆ ಕೂಗಿದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತ್ತು. ಕಾರ್ಯಕ್ರಮ ನಡೆದ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನ ಮುಂಭಾಗ ಶನಿವಾರ ರಾತ್ರಿ ಮತ್ತು ಭಾನುವಾರ ಪ್ರತಿಭಟನೆ ನಡೆಸಿತ್ತು. ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಜೆ.ಸಿ.ನಗರ ಪೊಲೀಸರಿಗೂ ದೂರು ನೀಡಲಾಗಿತ್ತು.
ಎಬಿವಿಪಿ ವಿರುದ್ಧ ದೂರು : ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು ಆಡಳಿತ ಮಂಡಳಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಪ್ರತಿಭಟನೆ ನಡೆಸುವ ವೇಳೆ ಕಾಲೇಜಿನ ನಾಮಫಲಕಕ್ಕೆ ಮಸಿ ಬಳಿಯಾಗಿದೆ. ವಿದ್ಯುತ್ ದೀಪಗಳನ್ನು ಒಡೆಯಲಾಗಿದೆ, ಸಿಬ್ಬಂದಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.