ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡುಗೆ ಚೆನ್ನಾಗಿಲ್ಲವೆಂಬ ಅವಹೇಳನಕ್ಕೆ ನೊಂದು ಬೆಂದುಹೋದ ಗೃಹಿಣಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಅಡುಗೆ ಚೆನ್ನಾಗಿಲ್ಲವೆಂದು ಪತಿ ಬೈದಿದ್ದಕ್ಕೆ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ಗುರುವಾರ ನಡೆದಿದೆ.

ಬೆಂಗಳೂರಿನ ಸೋನಲ್ ಅಗರ್ ವಾಲ್ ಪ್ರಕರಣ, ಬಗೆದಷ್ಟೂ ನಿಗೂಢ ಬೆಂಗಳೂರಿನ ಸೋನಲ್ ಅಗರ್ ವಾಲ್ ಪ್ರಕರಣ, ಬಗೆದಷ್ಟೂ ನಿಗೂಢ

ಜಯಲಕ್ಷ್ಮೀ(41) ಮೃತರು, ಅಡುಗೆ ಚೆನ್ನಾಗಿಲ್ಲ ಎಂದು ಪತಿ ನಾಗರಾಜ್ ಹೇಳಿದ್ದಕ್ಕೆ ಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇರೆಗೆ ನಾಗರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಲ್ಫಿ ವಿಚಾರಕ್ಕೆ ಮನಸ್ತಾಪ: ಮೈಸೂರಿನಲ್ಲಿ ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಸೆಲ್ಫಿ ವಿಚಾರಕ್ಕೆ ಮನಸ್ತಾಪ: ಮೈಸೂರಿನಲ್ಲಿ ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಜಯಲಕ್ಷ್ಮೀ ಹಾಗೂ ನಾಗರಾಜ್ ಮೂಲತಃ ಉತ್ತರ ಕರ್ನಾಟಕದ ರಾಯಚೂರಿನವರು, 2008ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನಾಗರಾಜ್ ಡಿಜೆ ಹಳ್ಳಿಯಲ್ಲಿ ಹೇರ್ ಸಲೂನ್ ನಡೆಸುತ್ತಿದ್ದಾರೆ.

Scolded for not preparing tasty curry, wife kills herself

ನಾಗರಾಜ್ ನಿತ್ಯ ಸಣ್ಣಪುಟ್ಟ ವಿಚಾರಳನ್ನು ಇಟ್ಟುಕೊಂಡು ಜಯಲಕ್ಷ್ಮಿಗೆ ತೊಂದರೆ ಕೊಡುತ್ತಿದ್ದ, ಊಟದ ಸಂದರ್ಭದಲ್ಲಿ ಪಾತ್ರೆಗಳನ್ನು ಬಿಸಾಡಿ ನಿನಗೆ ಅಡುಗೆ ಮಾಡುವುದಾಗಲಿ ಅಥವಾ ಮಕ್ಕಳನ್ನು ನೋಡಿಕೊಳ್ಳೋಕು ಬರೋದಿಲ್ಲ ಎಂದು ನಿಂದಿಸುತ್ತಿದ್ದ ಎಂದು ಜಯಲಕ್ಷ್ಮೀ ಪೋಷಕರು ದೂರಿದ್ದಾರೆ.

ಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ ಭುವನೇಶ್ವರಿನಗರದಲ್ಲಿ ಮನೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ

ಹಾಗೆಯೇ ಗುರುವಾರ ಅಡುಗೆ ವಿಚಾರವಾಗಿ ಜಗಳ ನಡೆದಿತ್ತು ಆಕೆ ತೀವ್ರವಾಗಿ ನೊಂದಿದ್ದಳು. ಬಳಿಕ ನಾಗರಾಜ್ ಸಲೂನ್ ಗೆ ಹೋಗಿದ್ದ, ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿರುವ ಸಂದರ್ಭ ನೋಡಿ ಜಯಲಕ್ಷ್ಮೀ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A 41 year old homemaker set herself ablaze on Thursday after her husband scolded her for not making tasty food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X