ಇಂದಿರಾ ಕ್ಯಾಂಟೀನ್ ಬಳಿಕ ಈಗ ಸವಿರುಚಿ ಸಂಚಾರಿ ಕ್ಯಾಂಟೀನ್
ಬೆಂಗಳೂರು, ಫೆಬ್ರವರಿ 27 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆವತಿಯಿಂದ ಪ್ರಾರಂಭಿಸಲಾದ ಸವಿರುಚಿ ಸಂಚಾರಿ ಕ್ಯಾಂಟೀನ್ ಸಿದ್ದರಾಮಯ್ಯ ಉದ್ಘಾಟಿಸಿದರು.
ಜತೆಗೆ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದರು.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮಾತನಾಡಿ,
ಪ್ರತಿ
ಜಿಲ್ಲಾ
ಕೇಂದ್ರದಲ್ಲಿ
ಮಹಿಳಾ
ಒಕ್ಕೂಟ
ಸವಿರುಚಿ
ಸಂಚಾರಿ
ಕ್ಯಾಂಟೀನ್
ಪ್ರಾರಂಭವಾಗಲಿದೆ.
ಸ್ತ್ರೀಶಕ್ತಿ
ಸಂಘಗಳು
ತಯಾರಿಸಿದ
ತಿಂಡಿ,
ಊಟವನ್ನು
ರಿಯಾಯಿತಿ
ದರದಲ್ಲಿ
ಸಾರ್ವಜನಿಕರಿಗೆ
ಮಾರಾಟ
ಮಾಡುತ್ತದೆ.
ಇದರಿಂದ
ಸತ್ರೀಶಕ್ತಿ
ಸಂಘಗಳ
ಸಬಲೀಕರಣವಾದರೆ
ಬಡವರಿಗೆ
ಊಟ,
ತಿಂಡಿ
ದೊರೆಯಲಿದೆ
ಎಂದರು.
ಪ್ರತಿ
ಮಹಿಳಾ
ಒಕ್ಕೂಟಕ್ಕೆ
10
ಲಕ್ಷ
ರೂ
ಬಡ್ಡಿ
ರಹಿತ
ಸಾಲ
ನೀಡಲಿದ್ದು
ಆ
ಹಣದಲ್ಲಿ
ಸವಿರುಚಿ
ಕ್ಯಾಂಟೀನ್ನ್ನು
ಪ್ರಾರಂಭಿಸಲಾಗುತ್ತಿದೆ
ಎಂದು
ತಿಳಿಸಿದರು.
ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ವಿಕಲಚೇತನರಿಗೆ ೪ ಸಾವಿರ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ನೀಡಲಾಗುತ್ತದೆ. ಇಂದು ಸಂಕೇತವಾಗಿ ೧೬ ಸವಿರುಚಿ ಸಂಚಾರಿ ಕ್ಯಾಂಟೀನ್ ಹಾಗೂ100 ಯಂತ್ರ ಚಾಲಿತ ದ್ವಿಚಕ್ರ ವಾಹನಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಉಮಾಶ್ರೀ, ಎಚ್.ಎಂ. ರೇವಣ್ಣ, ಕೆ.ಜೆ. ಜಾರ್ಜ್, ಮೇಯರ್ ಸಂಪತ್ ರಾಜ್ ಇದ್ದರು.