ನ.20ರಂದು 'ಸತ್ತವನ ಸಂತಾಪ' ನಾಟಕದ 5ನೇ ಪ್ರದರ್ಶನ
ನಾಲ್ಕು ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿರುವ ಜ್ಯೋತಿರ್ಮೇಘ ನಾಟಕ ತಂಡವು ಈಗ 5ನೇ ಪ್ರದರ್ಶನ ಮಾಡಲು ಸಜ್ಜಾಗಿದೆ. ಇದೇ ನವೆಂಬರ್ 20 ರಂದು ಮಲ್ಲತಹಳ್ಳಿ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು, ನವೆಂಬರ್. 19: ನಾಲ್ಕು ಯಶಸ್ವಿ ಪ್ರದರ್ಶನಗಳ ಬಳಿಕ ಇದೀಗ ಜ್ಯೋತಿರ್ಮೇಘ ನಾಟಕ ತಂಡವು ಕೈಲಾಸಂ ಬರೆದಿರುವ "ಸತ್ತವನ ಸಂತಾಪ" ಎಂಬ ನಾಟಕದ ಐದನೇ ಪ್ರದರ್ಶನಕ್ಕೆ ಅಣಿಯಾಗಿದೆ. ಇದೇ (ನ.20) ಭಾನುವಾರ ಬೆಂಗಳೂರಿನ ಮಲ್ಲತಹಳ್ಳಿ ಕಲಾಗ್ರಾಮದಲ್ಲಿ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ.
ಈ "ಸತ್ತವನ ಸಂತಾಪ" ನಾಟಕದಲ್ಲಿ ರಾಜಕೀಯ ಕುತಂತ್ರ, ಭ್ರಷ್ಟಾಚಾರ ಮತ್ತು ಲಂಪಟತನಗಳು ಸಮಾಜದಲ್ಲಿ ಅಂದಿನಿಂದ ಇಂದಿನವರೆಗೂ ಅಳಿಸಾಗದ ಒಂದು ಕಪ್ಪು ಚುಕ್ಕಿ ಎಂಬ ಸಾರವನ್ನು ವಿಡಂಬನೆಯ ಮೂಲಕ ವ್ಯಕ್ತಪಡಿಸಿದ್ದು, ಅದಕ್ಕೆ ಹಾಸ್ಯದ ಲೇಪನದ ಮೂಲಕ ಸಮಾಜಕ್ಕೆ ಕೈಗನ್ನಡಿಯಂತಿದೆ.[ಟಿಪಿ ಕೈಲಾಸಂರ ಸತ್ತವನ ಸಂತಾಪ ನಾಟಕ ನೋಡಿ]
ಮಧ್ಯಮ ವರ್ಗದವರ ನೋವು, ಗಂಡ ಹೆಂಡಿರ ಪ್ರೀತಿ ಕೂಡಿದ ಜಗಳ, ಆಡು ಭಾಷೆಯ ಮಾತುಗಳು, ಇವೆಲ್ಲವನ್ನೂ ನಾಜೂಕಾಗಿ ಹೆಣೆದಿರುವ ಕೈಲಾಸಂ ಅವರ ಈ ನಾಟಕವು ಎಂದೆಂದಿಗೂ ಪ್ರಸತುತವಾಗಿರುವಂತೆ, ಹಾಗೇ ಯೋಚೆನೆಗೆ ಈಡುವಾಡುವಂತೆ ಬರೆದಿದ್ದಾರೆ.
ಸಾವಿನ ಸುತ್ತ ನಡೆಯುವ ತಂತ್ರ-ಪ್ರತಿ ತಂತ್ರಗಳ, ಮಾನವನ ದುರಾದರ್ಶಗಳ ಅತ್ಯಂತ ಸೋಕ್ಷ್ಮವಾದ, ವಿಡಂಬನಾತ್ಮಕ ಹಾಸ್ಯದ ಕಥಾಹಂದರವನ್ನು ಈ ನಾಟಕವು ಹೊಂದಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಈ ನಾಟಕದ ಐದನೇ ಪ್ರದರ್ಶನವನ್ನು ನವೆಂಬರ್ 20ರಂದು ಸಂಜೆ 7.30ಕ್ಕೆ ನಡೆಯಲಿದೆ. ನಾಟಕದ ಅವಧಿ ತೊಂಭತ್ತು ನಿಮಿಷಗಳು.
ನಾಟಕದ
ದರ:
100
ರೂ.
ಆನ್
ಲೈನ್
ಟೆಕೆಟ್
ಬುಕ್ಕಿಂಗ್
ಗಾಗಿ
ಇಲ್ಲಿ
ಕ್ಲಿಕ್ಕಿಸಿ
.