ಬೆಂಗಳೂರಲ್ಲಿ ಹೃದಯ ಸಂಬಂಧಿ 3 ವಿಶೇಷ ಘಟಕ ಸ್ಥಾಪನೆ
ಬೆಂಗಳೂರು, ಡಿಸೆಂಬರ್, 19: ಹೃದಯ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ನಗರದ ಸಾಗರ್ ಆಸ್ಪತ್ರೆ ಮೂರು ವಿಶೇಷ ಘಟಕಗಳನ್ನು ತೆರೆದಿದ್ದು, ಹೃದಯ ಬೇನೆಯಿಂದ ನರಳುವವರ ಸಂಕಷ್ಡ ದೂರ ಮಾಡುವಲ್ಲಿ ಮುಖ್ಯ ಪಾತ್ರವಹಿಸಲಿದೆ ಎಂದು ಸಾಗರ್ ಆಸ್ಪತ್ರೆಯ ಹೃದಯ ತಜ್ಞ ಡಾ. ಮೊಹಮ್ಮದ್ ರೆಹಾನ್ ಸಯ್ಯದ್ ತಿಳಿಸಿದರು.
ಸಾಗರ ಆಸ್ಪತ್ರೆಯಲ್ಲಿ ಹೃದಯ ಕಾಯಿಲೆಯನ್ನು ಗುಣಮಾಡುವ ಸಲುವಾಗಿ ಮಿನಿಮಲ್ ಆಕ್ಸಿಸ್ ಸರ್ಜರಿ ಕೇಂದ್ರ, ಹೃದಯ ವೈಫಲ್ಯ ಸರ್ಜರಿ ಕೇಂದ್ರ ಮತ್ತು ಹೃದಯ ಕಸಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಸಾಗರ ಆಸ್ಪತ್ರೆಯಲ್ಲಿ ರೂಪುಗೊಂಡಿದೆ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.[ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು]
ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತದ ಮಂದಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. 40 ವಯಸ್ಸಿನವರು ಶೇ. 12 ಮಂದಿ, 25 ರಿಂದ 40 ವಯಸ್ಸಿನವರಲ್ಲಿ ಶೇ.15 ರಿಂದ 20ರಷ್ಟು ಮಂದಿ ಪ್ರತಿವರ್ಷ ಹೃದಯ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.[ನಗುತ್ತಾ,ನಗಿಸುತ್ತಿದ್ದರೆ ಹೃದಯ ಆರೋಗ್ಯ ನಿಮ್ಮಂತೆ ಹಸನ್ಮುಖಿ]
ಇದೀಗ ಸ್ಥಾಪನೆಯಾಗಿರುವ ಮೂರು ಕೇಂದ್ರಗಳು ಹೃದಯ ಸಂಬಂಧಿ ಕಾಯಿಲೆಯನ್ನು ನಿಖರವಾಗಿ ಗುರುತಿಸಲಿದೆ. ಇದರಿಂದ ಸೂಕ್ತ ಚಿಕಿತ್ಸೆ ನೀಡಲು ಇದು ನೆರವಾಗಲಿದೆ ಎಂದು ವಿಶೇಷ ಘಟಕಗಳ ಬಗ್ಗೆ ಮಾಹಿತಿ ನೀಡಿದರು.