ನಿವೃತ್ತ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ನಿಧನ
ಬೆಂಗಳೂರು, ಏಪ್ರಿಲ್ 07 : ನಿವೃತ್ತ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ಅವರು ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಮುಂಜಾನೆ ಮಲ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ
ಆಂಧ್ರಪ್ರದೇಶದ
ನೆಲ್ಲೂರಿನವರಾದ
ಬಿಪಿನ್
ಗೋಪಾಲಕೃಷ್ಣ
(63)
ಅವರು
1982ರಲ್ಲಿ
ಐಪಿಎಸ್
ಪರೀಕ್ಷೆ
ಪಾಸು
ಮಾಡಿ
ಕರ್ನಾಟಕದಲ್ಲಿ
ಸೇವೆ
ಆರಂಭಿಸಿದ್ದರು.
2015ರ
ಜುಲೈನಲ್ಲಿ
ಸೇವೆಯಿಂದ
ನಿವೃತ್ತರಾಗಿದ್ದರು.
ಉಡುಪಿ, ಚಿಕ್ಕಮಗಳೂರು, ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿಪಿನ್ ಗೋಪಾಲಕೃಷ್ಣ ಅವರು ಸೇವೆ ಸಲ್ಲಿಸಿದ್ದರು. ಮೈಸೂರು ನಗರದ ಪೊಲೀಸ್ ಆಯುಕ್ತರಾಗಿ, ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ), ಸಿಐಡಿ ಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. [ಸ್ಫೋಟ ತನಿಖೆಗಾಗಿ ಬಿಪಿನ್ ಗೋಪಾಲಕೃಷ್ಣ ಮುಂಬೈಗೆ]
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಐಜಿಪಿಯಾಗಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು. 2000 ಹಾಗೂ 2006ರಲ್ಲಿ ಗೋಪಾಲಕೃಷ್ಣ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಲಭಿಸಿತ್ತು.
ರಾಜ್ಯದ ಡಿಜಿ, ಐಜಿಪಿ ಹುದ್ದೆಗೆ ಸುಶಾಂತ್ ಮಹಾಪಾತ್ರ, ಆರ್.ಕೆ. ದತ್ತ ಅವರ ಹೆಸರಿನ ಜೊತೆ ಬಿಪಿನ್ ಗೋಪಾಲಕೃಷ್ಣ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಓಂ ಪ್ರಕಾಶ್ ಅವರು ಡಿಜಿ, ಐಜಿಪಿಯಾಗಿ ನೇಮಕವಾಗಿದ್ದರು.