ಲೈಂಗಿಕ ದೌರ್ಜನ್ಯ ಪ್ರಕರಣ, ಶಿಕ್ಷಕ ಪೊಲೀಸ್ ವಶಕ್ಕೆ
ಬೆಂಗಳೂರು, ಅ.31 : ಇಂದಿರಾನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಜಯಶಂಕರ್ನನ್ನು 4ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆದರೆ ಶಾಲೆಗಳ ಆಡಳಿತ ಮಂಡಳಿಯೇ ನೇರ ಹೊಣೆ. ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ
ಮಾತನಾಡಿದ
ಕೆ.ಜೆ.ಜಾರ್ಜ್,
ನ್ಯಾಯಾಲಯದ
ಮಾರ್ಗದರ್ಶನದಂತೆ
ಲೈಂಗಿಕ
ದೌರ್ಜನ್ಯ
ನಡೆಯುವ
ಶಾಲೆಗಳ
ವಿರುದ್ಧ
ಶಿಸ್ತು
ಕ್ರಮ
ಕೈಗೊಳ್ಳಲಿದ್ದೇವೆ.
ಶಾಲೆಯ
ಆವರಣದೊಳಗೆ
ಲೈಂಗಿಕ
ದೌರ್ಜನ್ಯದಂತಹ
ಪ್ರಕರಣಗಳು
ಶಾಲೆಗಳ
ಆಡಳಿತ
ಮಂಡಳಿಯೇ
ನೇರ
ಹೊಣೆಯಾಗುತ್ತದೆ
ಎಂದು
ಗೃಹ
ಸಚಿವರು
ತಿಳಿಸಿದರು.
[ಕೇಂಬ್ರಿಡ್ಜ್
ಶಾಲೆ
ಮುಂದೆ
ಪ್ರತಿಭಟನೆ]
ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಹಾಗೂ ತಪ್ಪಿತಸ್ಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪೊಲೀಸ್ ಇಲಾಖೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದೆ. ಈ ಮಾರ್ಗಸೂಚಿಯನ್ನು ನ್ಯಾಯಾಲಯ ಪರಿಶೀಲಿಸುತ್ತಿದ್ದು, ಇದನ್ನು ಪಾಲಿಸದ ಶಾಲೆಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ನ್ಯಾಯಾಲಯ ಆದೇಶ ನೀಡಲಿದೆ ಎಂದರು. [ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]
ಆರೋಪಿ ಪೊಲೀಸ್ ವಶಕ್ಕೆ : ಇಂದಿರಾನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಜಯಶಂಕರ್ನನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು, ಆರೋಪಿಯನ್ನು 4 ದಿನಗಳ ಕಾಲ ಬೈಯಪ್ಪನಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿ 10ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ಎಂ.ಎನ್.ರೆಡ್ಡಿ ಭೇಟಿ : ಕೇಂಬ್ರಿಡ್ಜ್ ಶಾಲೆಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಬಾಲಕಿಯ ಹೇಳಿಕೆಯನ್ನು ಪಡೆಯಬೇಕಾಗಿದೆ, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಶೀಘ್ರವೇ ತನಿಖೆಯನ್ನು ಮುಗಿಸಲಿದ್ದೇವೆ ಎಂದು ತಿಳಿಸಿದರು.