ಅಣ್ಣ-ತಂಗಿ ಬಾಂಧವ್ಯ ಬೆಸೆವ ರಕ್ಷಾ ಬಂಧನ ಸಂಭ್ರಮ
ನವದೆಹಲಿ, ಆಗಸ್ಟ್, 29 :ಶನಿವಾರ ದೇಶದೆಲ್ಲೆಡೆ ಅಣ್ಣ ತಂಗಿಯರ ಬಂಧನಕ್ಕೆ ದಿವ್ಯತೆ ತಂದು ಕೊಡುವ ರಕ್ಷಾ ಬಂಧನ ಸಂಭ್ರಮ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ನಾಡಿನಾದ್ಯಂತ ರಕ್ಷಾ ಬಂಧನ ಸಂಭ್ರಮ ಮುಗಿಲು ಮುಟ್ಟಿದ್ದು, ಸಹೋದರಿಯರು ಸಹೋದರರಿಗೆ ಅವರ ಪ್ರೀತಿ, ನಂಬಿಕೆ ಮತ್ತು ಉನ್ನತಿಗಾಗಿ ಪ್ರಾರ್ಥಿಸಿದ್ದಾರೆ. ಈ ಹಬ್ಬದಲ್ಲಿ ಚಿಕ್ಕ ಮಕ್ಕಳು, ವಿಧವೆಯರು, ವಯೋವೃದ್ದರು, ಪರಿವರ್ತನಾ ಲಿಂಗದವರು ಸೇರಿದಂತೆ ರಾಖಿ ಕಟ್ಟುವುದರ ಮೂಲಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
ರಕ್ಷಾ ಬಂಧನದ ಪ್ರಯುಕ್ತ ಕೆಲವು ರಾಜ್ಯಗಳು ಮಹಿಳೆಯರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದು, ಶನಿವಾರ ಹರ್ಯಾಣ ಮತ್ತು ಚಂಡೀಘರ್ ನಲ್ಲಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಬಸ್ಗಳಲ್ಲಿ 2 ದಿನ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದಾರೆ.[ರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧ]
ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇನ್ನಿತರ ಗಣ್ಯರು ರಕ್ಷಾ ಬಂಧನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬನ್ನಿ ರಕ್ಷಾ ಬಂಧನ ಸಂಭ್ರಮದಲ್ಲಿ ಭಾಗವಹಿಸಿದ ದೇಶದ ಗಣ್ಯರ, ಜನತೆಯ ಖುಷಿಯಲ್ಲಿ ಪಾಲ್ಗೊಳ್ಳೋಣ....[ಚಿತ್ರ:ಪಿಟಿಐ]
ರಕ್ಷಾ ಬಂಧನದ ಶುಭಾಷಯ
ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ 'ರಾಖಿ ಸಹೋದರಿಯರು ಮತ್ತು ಸಹೋದರರನ್ನು ಪ್ರೀತಿ ಮತ್ತು ನಂಬಿಕೆಗಳಿಂದ ಬೆಸೆಯುತ್ತದೆ. ನಾವು ಭಾರತದಲ್ಲಿ ಮಹಿಳೆಯರ ಅದರಲ್ಲೂ ಹೆಣ್ಣು ಮಕ್ಕಳ ಉನ್ನತಿಗೆ ಪಣ ತೊಡೋಣ ಎಂದಿದ್ದಾರೆ.
ರಾಖಿ ಕಟ್ಟಿಸಿಕೊಂಡ ಖುಷಿಯಲ್ಲಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸುವುದರ ಜೊತೆಗೆ ನಾಡಿಗೆ ರಕ್ಷಾ ಬಂಧನದ ಶುಭಾಷಯ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಕಟ್ಟಿದ ರಾಖಿ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡುಗೆ ರಾಖಿ ಕಟ್ಟಿದೆ ದೇಶದ ಜನತೆಗೆ ಶುಭಾಷಯ ತಿಳಿಸಿದ್ದಾರೆ.
ಗಡಿಭದ್ರತಾ ಪಡೆಗೆ ರಾಖಿ ಕಟ್ಟಿದ ಶಾಲಾ ಮಕ್ಕಳು.
ಜಮ್ಮು ಕಾಶ್ಮೀರ ಶಾಲಾ ಮಕ್ಕಳು ಬಿಎಸ್ ಎಫ್ ಯೋಧರಿಗೆ ರಾಖಿ ಕಟ್ಟಿ ಅಣ್ಣ ತಂಗಿಯರ ಹಬ್ಬದಲ್ಲಿ ಪಾಲ್ಗೊಂಡರು.
ನೋಡಿ ರಾಜನಾಥ್ ಸಿಂಗ್ ಅವರ ಸಂಭ್ರಮ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುಟಾಣಿಗಳಿಂದ ರಾಖಿ ಕಟ್ಟಿಸಿಕೊಂಡ ಮಕ್ಕಳ ಖುಷಿಯಲ್ಲಿ ಪಾಲ್ಗೊಂಡಿದ್ದಾರೆ.
ಲಿಂಗ ಪರಿವರ್ತನದಾರರು ರಾಖಿ ಕಟ್ಟಿದರು
ಮರಾಠಿ ನಟ ಪ್ರದೀಪ್ ಪಟವರ್ಧನ್ ಅವರಿಗೆ ಲಿಂಗ ಪರಿವರ್ತನಾದಾರರರು ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ...
Some
more
photos
from
the
Rakshabandhan
celebrations.
pic.twitter.com/hSh6QfNpJX
—
Narendra
Modi
(@narendramodi)
August
29,
2015