ಬೆಂಗಳೂರಿಗರಿಗೆ ಗುಡ್ ಮಾರ್ನಿಂಗ್ ಹೇಳಿದ ಮಳೆ
ಬೆಂಗಳೂರು, ನ.13 : ಕೆಲಸಕ್ಕೆ ಹೋಗಲು ಸಿದ್ಧವಾಗಿ ನಿಂತ ಬೆಂಗಳೂರಿಗರಿಗೆ ಮಳೆ ಗುಡ್ ಮಾರ್ನಿಂಗ್ ಹೇಳಿದೆ. ಗುರುವಾರ ಬೆಳಗ್ಗೆಯಿಂದಲೇ ನಗರದಲ್ಲಿ ತುಂತುರು ಮಳೆಯಾಗುತ್ತಿದ್ದು, ಛತ್ರಿ ಹಿಡಿದು, ಜರ್ಕಿನ್ ಹಾಕಿಕೊಂಡು ಜನ ಸಂಚಾರ ಆರಂಭವಾಗಿದೆ. ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ನಿರ್ದೇಶಕರಾದ ಪುಟ್ಟಣ್ಣ ಅವರು ಈ ಕುರಿತು ಮಾಹಿತಿ ನೀಡಿದ್ದು, ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ನಗದಲ್ಲಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಮಳೆಯಾಗಲಿದೆ ಎಂದು ಹೇಳಿದ್ದಾರೆ.
ಈ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ. ಕರ್ನಾಟಕದಲ್ಲಿ ಹೆಚ್ಚು ಮಳೆಯಾಗದೆ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗಲಿದೆ. ಕರಾವಳಿ ಮತ್ತು ಉತ್ತ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಪುಟ್ಟಣ್ಣ ಹೇಳಿದ್ದಾರೆ.
ಮಂಡ್ಯ,
ಚಾಮರಾಜನಗರ,
ಮೈಸೂರು,
ದಕ್ಷಿಣ
ಕನ್ನಡ,
ಮಲೆನಾಡು
ಮತ್ತು
ಉತ್ತರ
ಕರ್ನಾಟಕದ
ಕೆಲವು
ಜಿಲ್ಲೆಗಳಲ್ಲಿ
ಮೂರು
ದಿನಗಳ
ಕಾಲ
ತುಂತುರು
ಮಳೆಯಾಗಲಿದೆ.
ಕರಾವಳಿ
ಭಾಗದಲ್ಲಿ
ಶುಕ್ರವಾರ
ಮಳೆ
ಹೆಚ್ಚಾಗುವ
ಸಾಧ್ಯತೆ
ಇದೆ
ಎಂದು
ಮುನ್ಸೂಚನೆ
ನೀಡಿದ್ದಾರೆ.
ರೈತರಿಗೆ ಆತಂಕ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗ ಮಳೆಯಾದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹತ್ತಿ, ಈರುಳ್ಳಿ ಬೆಳೆಗಳು ಕಟಾವಿನ ಹಂತದಲ್ಲಿವೆ. ಮಲೆಮನಾಡು ಭಾಗದಲ್ಲಿ ಅಡಿಕೆ ಕಟಾವು ಆರಂಭವಾಗಲಿದೆ. ದಿನಪೂರ್ತಿ ತುಂತುರು ಮಳೆಸುರಿಯುತ್ತಿದ್ದರೆ ರೈತರಿಗೆ ತೊಂದರೆ ಉಂಟಾಗಲಿದೆ.
Conditions
for
Bangalore,
IN
at
8:00
am
IST:
Current
Conditions:
Light
Rain,
23
CForecast:
Thu
-
Thunderstorms.
High:
26
Low:
19
Fri
...
—
Bangalore
weather
(@BloreFeelsLike)
November
13,
2014