ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಭಾರಿ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿ ವೃದ್ಧೆ ಸಾವು

By Nayana
|
Google Oneindia Kannada News

ಬೆಂಗಳೂರು, ಮೇ 11: ಬೆಂಗಳೂರಿನಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಏಕಾಏಕಿ ಚರಂಡಿ ನೀರು ಮನೆಗೆ ನುಗ್ಗಿ ಮನೆಯಿಂದ ಹೊರ ಬರಲಾರದೆ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ರತ್ನಮ್ಮ (55) ಮೃತ ವೃದ್ಧೆ. ಮನೆಯಲ್ಲಿ ವೃದ್ಧೆ ರತ್ನಮ್ಮ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

ಮನೆಯ ಪಕ್ಕದಲ್ಲೇ ರಾಜಕಾಲುವೆ ದುರಸ್ಥಿಯಾಗುತ್ತಿದ್ದು, ರಾತ್ರಿಯ ಭಾರೀ ಮಳೆಗೆ ಏಕಾಏಕಿ ಮನೆಗೆ ಒಳಚರಂಡಿ ನೀರು ನುಗ್ಗಿದೆ. ಈ ವೇಳೆ ಮನೆಯಿಂದ ಹೊರಬರಲಾರದೇ ವೃದ್ಧೆ ಸಾವಿಗೀಡಾಗಿದ್ದಾರೆ. ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ವಿಧಾನಸಭೆ ಚುನಾವಣೆ ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ ವಿಧಾನಸಭೆ ಚುನಾವಣೆ ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಮೇ 15ರವರೆಗೂ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೇ 15ರವರೆಗೂ ಸಂಜೆ ಅಥವಾ ರಾತ್ರಿ ಮಳೆ ಮುಂದುವರೆಯುವ ಸೂಚನೆ೩ಯನ್ನು ಹವಾಮಾನ ಇಲಾಖೆ ನೀಡಿದೆ. ನಗರದಲ್ಲಿ ಮೇ 12 ಮತ್ತು 13ರಂದು ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.

Rain hits with thunderstorm in Bengaluru

ಗುರುವಾರ 24.5 ಮಿ.ಮೀ ಮಳೆಯಾಗಿದ್ದು, ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ 8.4 ಮಿ.ಮೀ ಮಳೆ ದಾಖಲಾಗಿದೆ. ರಾತ್ರಿ 7.30ರ ವೇಳೆಗೆ ಪ್ರಾರಂಭವಾಗಿದ್ದ ಮಳೆ ರಾತ್ರಿ 10 ಗಂಟೆಯವರೆಗೂ ಸತತವಾಗಿ ಸುರಿದಿದೆ.

English summary
Heavy rain disrupted normal life in Bengaluru and various districts in the state on Thursday evening. Indian meteorological department has forecasted the rain will continue till May 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X