ರೈಲು ಸಂಚಾರ ರದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ
ಬೆಂಗಳೂರು, ಡಿಸೆಂಬರ್ 11: ಯಲಹಂಕ- ಧರ್ಮಾವರಂ ರೈಲ್ವೆ ಮಾರ್ಗದಲ್ಲಿ ಇಂಟರ್ಲಾಕಿಂಗ್ ಕಾರ್ಯ ನಡೆಯುತ್ತಿರುವ ಕಾರಣ ಡಿಸೆಂಬರ್ 12ರಿಂದ 15ರವರೆಗೆ ಕೆಲವು ರೈಲುಗಳನ್ನು ರದ್ದುಪಡಿಸಲಾಗುತ್ತಿದೆ. ಇನ್ನು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗುತ್ತಿದೆ.
ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು
ಯಾವ್ಯಾವ ರೈಲುಗಳು ರದ್ದು: ಬೆಂಗಳೂರು ಕಂಟೋನ್ಮೆಂಟ್-ವಿಜಯವಾಡ ಪ್ಯಾಸೆಂಜರ್ . ವಿಜಯವಾಡ-ಬೆಂಗಳೂರು ಕಂಟೋನ್ಮೆಂಟ್ , ಬೆಂಗಳೂರು-ಹಿಂದೂಪುರ ಪ್ಯಾಸೆಂಜರ್, ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್, ಯಶವಂತಪುರ-ಕಾಚಿಗುಡ, ಕಾಚಿಗುಡ-ಯಶವಂತಪುರ ಮಾರ್ಗದ ರೈಲುಗಳು ರದ್ದಾಗಲಿವೆ.
ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'
ಇನ್ನು ಯಶವಂತಪುರ-ಮಚಲೀಪಟ್ಟಣ, ಮಚಲೀಪಟ್ಟಣ-ಯಶವಂತಪುರ, ಚೆನ್ನೈ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಎಕ್ಸ್ಪ್ರೆಸ್, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಚೆನ್ನೈ ಸಂಚಾರ ಭಾಗಶಃ ರದ್ದಾಗಲಿದೆ.
ಮಾರ್ಗ ಬದಲಾವಣೆ ಎಲ್ಲೆಲ್ಲಿ? ಅಹಮದಾಬಾದ್-ಯಶವಂತಪುರ ಎಕ್ಸ್ಪ್ರೆಸ್, ಬಾಗಲಕೋಟೆ-ಕೆಎಸ್ಆರ್ ಬೆಂಗಳೂರು, ಸಾಯಿನಗರ ಶಿರಡಿ-ಚೆನ್ನೈ, ಯಶವಂತಪುರ-ಗೋರಖ್ಪುರ್, ಕೊಯಮತ್ತೂರು-ರಾಜ್ಕೋಟ್, ತಿರುವನಂತಪುರಂ-ಛತ್ರಪತಿ ಶಿವಾಜಿ ಟರ್ಮಿನಲ್, ಲೋಕಮಾನ್ಯ ತಿಲಕ್ ಟರ್ಮಿನಲ್-ಕೊಯಮತ್ತೂರು, ಕೊಯಮತ್ತೂರು-ಲೋಕಮಾನ್ಯ ತಿಲಕ್ ಟರ್ಮಿನಲ್, ಕೆಎಸ್ಆರ್ ಬೆಂಗಳೂರು-ಅಜ್ಮಿರ್, ನಿಜಾಮುದ್ದೀನ್-ಕೊಯಮತ್ತೂರು, ನಿಜಾಮುದ್ದೀನ್-ಯಶವಂತಪುರ ಎಕ್ಸ್ಪ್ರೆಸ್, ಪುರಿ-ಯಶವಂತಪುರ ಎಕ್ಸ್ಪ್ರೆಸ್, ಯಶವಂತಪುರ-ಪುರಿ ಬದಲಿ ಮಾರ್ಗದಲ್ಲಿ ಸಂಚರಿಸಲಿದೆ.
ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು
ಮೈಸೂರು-ಬಾಗಲಕೋಟೆ ಎಕ್ಸ್ಪ್ರೆಸ್ ಎಕ್ಸ್ಪ್ರೆಸ್ ರೈಲು ಡಿ.13, 14 ಹಾಗೂ 15ರಂದು ಕೆಎಸ್ಆರ್ನಿಂದ ಆರಂಭವಾಗಿ ಕೆಎಸ್ಆರ್ ಬೆಂಗಳೂರು ಹಿಂದೂಪುರ ನಡುವಿನ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.