ಸಾಂಸ್ಕೃತಿಕ ಲೋಕಕ್ಕೆ ರಂಗಮಂದಿರ ಅರ್ಪಣೆ
ಬೆಂಗಳೂರು: ನವೆಂಬರ್,3: ಜಗಮಗಿಸುವ ವೈವಿಧ್ಯಮಯ ದೀಪಾಲಾಂಕಾರದೊಂದಿಗೆ ವಿವಿಧ ಕಾರ್ಯಕ್ರಮಕ್ಕೆ ಪ್ರಭಾತ್ ಕಲಾಪೂರ್ಣಿಮಾ ರಂಗಮಂದಿರ ಇದೇ ನ.5ರಂದು ಲೋಕಾರ್ಪಣೆಗೊಳ್ಳಲಿದೆ.
ಈ ರಂಗಮಂದಿರ ಇರುವುದು ಬೆಂಗಳೂರಿನ ಎನ್.ಆರ್. ಕಾಲನಿಯಲ್ಲಿ ಅದ್ಭುತವಾಗಿ ರೂಪಿತವಾಗಿರುವ ವೇದಿಕೆ. ನಾಟಕ, ನೃತ್ಯ, ಸಂಗೀತ ಕಛೇರಿ, ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಹೇಳಿಮಾಡಿಸಿದಂತಿರುವ ಈ ಭವ್ಯ ಮಂದಿರ.
ಪ್ರಭಾತ್ ಕಲಾಪೂರ್ಣಿಮಾವನ್ನು ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಮತ್ತು ಮಾಜಿ ಮೇಯರ್ ಬಿ.ಎಸ್ ಸತ್ಯನಾರಾಯಣ ಅವರು ಸಂಜೆ ಲೋಕಾರ್ಪಣೆ ಗೊಳಿಸಲಿದ್ದಾರೆ.[ಸವಿಸವಿ ನೆನಪುಗಳೊಂದಿಗೆ ಸಿಂಗಾರ ಸಮ್ಮೇಳನಕ್ಕೆ ಮಂಗಳ]
ಸಾಂಸ್ಕೃತಿಕ ಕಲಾ ರಸಿಕರ ಮನಸೂರೆಗೊಳಿಸಲು ಪ್ರಭಾತ್ ಕಲಾವಿದರ ಕುಟುಂಬ ಈ ಹಿಂದೆ ನಗರದ ಕೋರಮಂಗಲದಲ್ಲಿ ಕೆಇಎ ಪ್ರಭಾತ್ ರಂಗಮಂದಿರ ಆರಂಭಿಸಿತ್ತು.
ಇದೀಗ ಎನ್.ಆರ್ ಕಾಲನಿಯಲ್ಲಿ ಪ್ರಭಾತ್ ಕಲಾಪೂರ್ಣಿಮಾ ಎಂಬ ಮತ್ತೊಂದು ಅತ್ಯಾಧುನಿಕ ಸುಸಜ್ಜಿತ ಕಲಾ ಮಂದಿರವನ್ನು ಆರಂಭಿಸಲಿದೆ.
ಕಲಾಮಂದಿರದ
ಆರಂಭೋತ್ಸವದ
ಹಿನ್ನೆಲೆಯಲ್ಲಿ
ಹಲವು
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನೂ
ಹಮ್ಮಿಕೊಳ್ಳಲಾಗಿದೆ.
ನವೆಂಬರ್
5ರ
ಸಂಜೆ
7
ಗಂಟೆಗೆ
ಕಿರುತೆರೆಯ
ಖ್ಯಾತ
ನಟ,
ನಿರ್ದೇಶಕ
ಎಸ್.ಎನ್.ಸೇತುರಾಮ್
ಅವರ
ತಂಡದಿಂದ
'ಅತೀತ'
ಎಂಬ
ನಾಟಕ
ಪ್ರದರ್ಶನಗೊಳ್ಳಲಿದೆ..[ಹುಚ್ಚೆದ್ದು
ಕುಣಿಯುವಂತೆ
ಮಾಡಿದ
ಜಾನಪದ
ಕಲಾವೈಭವ]
ನವೆಂಬರ್
6ರಂದು
ಸಂಜೆ
6.30ಕ್ಕೆ
ಖ್ಯಾತ
ಕಥಕ್
ಜೋಡಿ
ನಿರುಪಮಾ
ರಾಜೇಂದ್ರ
ಅವರಿಂದ
'ಕಥಾಕೀರ್ತನ'
ಎಂಬ
ನೃತ್ಯರೂಪಕ
ನಡೆಯಲಿದೆ.
ನವೆಂಬರ್
13ರಂದು
ಖ್ಯಾತ
ಹಿಂದೂಸ್ಥಾನಿ
ಗಾಯಕ
ಫಯಾಜ್ಖಾನ್
ಅವರಿಂದ
ಗಾಯನ
ಕಾರ್ಯಕ್ರಮ
ಜರುಗಲಿದೆ.
ಮಾಹಿತಿಗಾಗಿ: 96322057799