ಜು.19ರಂದು ಬೆಂಗಳೂರಲ್ಲಿ ನೀರೂ ಇರಲ್ಲ, ಕರೆಂಟೂ ಇರಲ್ಲ
ಬೆಂಗಳೂರು, ಜು.18: ಭಾರಿ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನಲ್ಲಿ ಹೂಳು ಮಿಶ್ರಿತವಾಗಿರುವ ಕಾರಣ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಬೆಸ್ಕಾಂ ವ್ಯಾಪ್ತಿಯ ಎಫ್ 9 ಫೀಡರ್ 66/11 ಕೆವಿ ನಾಗಪುರ ಉಪಕೇಂದ್ರದಲ್ಲಿ ವಿದ್ಯುತ್ ಸರಬರಾಜು ಉಪಕೇಂದ್ರದಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಗುರುವಾರ ಜು.19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರಲ್ಲಿ ಒಂದು ವಾರ ಯಾವ್ಯಾವ ಬಡಾವಣೆಯಲ್ಲಿ ಕರೆಂಟ್ ಇರಲ್ಲ!
ಮಹಾಲಕ್ಷ್ಮೀಪುರ, ನಾಗಪುರ, ಎಂಎಲ್ ಬಡಾವಣೆ, ಇಸ್ಕಾನ್ ಎದುರು, ಆಂಜನೇಯ ದೇವಸ್ಥಾನ, ಮಹಾಲಕ್ಷ್ಮೀ ಬಡಾವಣೆ 3ರಿಂದ 8 ನೇ ಕ್ರಾಸ್, ಕಮಲಮ್ಮ ಗುಂಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Comments
English summary
Bescom is conduction some maintenance technical drive. So there will be no power in Electronic city and many places of Bengaluru on July 19.
Story first published: Wednesday, July 18, 2018, 14:13 [IST]