ಹಾಡಹಗಲೇ ಬೆಂಗಳೂರಿನಲ್ಲಿ ಗೂಂಡಾಗಳಿಂದ ಪೊಲೀಸ್ ಮೇಲೆ ಹಲ್ಲೆ
ಬೆಂಗಳೂರು, ಮಾರ್ಚ್ 19: ಕರ್ನಾಟಕದಲ್ಲಿ ಪೊಲೀಸರ ಮೇಲೆ ಗೂಂಡಾಗಳ ಹಲ್ಲೆ ಮುಂದುವರಿದಿದೆ. ಇಂದು ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಮೇಲೆ ಬೆಂಗಳೂರಿನಲ್ಲಿ ಹಾಡಹಗಲೇ ದಾಳಿ ನಡೆದಿದ್ದು, ಪೊಲೀಸರ ನೈತಿಕ ಸ್ಥೈರ್ಯವನ್ನೇ ಇದು ಕುಗ್ಗಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನಗರದ ಮಾರತಹಳ್ಳಿ ಸಮೀಪ, ವರ್ತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗೂಂಡಾಗಳು ಸಿದ್ದಾಪುರ ಕ್ರಾಸ್ ನಲ್ಲಿ ಪೊಲೀಸ್ ಪೇದೆ ಮೇಲೆ ಕೈ ಮಾಡಿದ್ದು, ಸಾರ್ವಜನಿಕರ ಮುಂದೆಯೇ ಅಟ್ಟಾಡಿಸಿ ಹೊಡೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೆಜೆ ನಗರ ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
Today police person was beaten up by goons near siddapura cross, vartur road, marathahalli, Bangalore.. this is the law n order situation in Karnataka.. 😏😬 @ippatel @vivekshettym @SirJadeja @ShefVaidya @bjparvind @AmitShah @shakkuiyer @CPBlr pic.twitter.com/N58GxvDoV3
— Ravi Bidar (@BidaRavi) March 18, 2018
ಪೊಲೀಸರ ಮೇಲೆ ಹೀಗೆ ದಿನ ನಿತ್ಯ ಸಾರ್ವಜನಿಕರು, ಗೂಂಡಾಗಳು ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಇನ್ನು ಸಾರ್ವಜನರಿಕ ಪರಿಸ್ಥಿತಿ ಏನು ಅಂತ ಜನರು ಸರಕಾರವನ್ನು ಕೇಳುವಂತಾಗಿದೆ.