ಬೆಂಗಳೂರಿನ ಬೇಗೂರು ಚರ್ಚಿನ ಬಳಿ ಭೀಕರ ಕೊಲೆ
ಬೇಗೂರಿನ ಸಮೀಪ ಮೇರಿ ಚರ್ಚ್ ಬಳಿ ಕಂಪ್ಯೂಟರ್ ಸರ್ವಿಸ್ ಸೆಂಟರಿನ ಮಾಲೀಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು, ಫೆಬ್ರವರಿ 13: ಬೆಂಗಳೂರಿನ ಮೇರಿ ಚರ್ಚ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅರುಣ್ (22) ಕೊಲೆಯಾದ ದುರ್ದೈವಿ. ಅರುಣ್ ತಮ್ಮ ಕುಟುಂಬದೊಂದಿಗೆ ಭಾನುವಾರ ಸಂಜೆ ಬೇಗೂರು ಸಮೀಪವಿರುವ ಮೇರಿ ಚರ್ಚಿಗೆ ಹೋಗಿದ್ದರು ಮರಳಿ ಬರುವಾಗ ಅರುಣ್ ಮೇಲೆ ದುರ್ಷಮಿಗಳು ಎರಗಿ ಚರ್ಚಿನ ಮುಂಭಾಗದಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದಾರೆ.[ಏಕವಚನದಲ್ಲಿ ಮಾತಾಡಿ ಇರಿದು ಕೊಂದ ಭೂಪ!]
ಇನ್ನು ಅರುಣ್ ಅವರು ಕಂಪ್ಯೂಟರ್ ಸರ್ಮಿಸ್ ಸೆಂಟರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಬೇಗೂರು ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳೇವೈಷಮ್ಯವೇ ಕೊಲೆಗೆ ಕಾರಣ ಎಂದಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Perpetrators kills the computer service man in front of Mary church, Begur, bengaluru. The reason for the murder of an old feud said police.