ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಬೈಕ್ ಕಳ್ಳರು ಬೆಂಗಳೂರಲ್ಲಿ ಮಾಡಿದ್ದೇನು?

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಇಬ್ಬರು ಬೈಕ್ ಕಳ್ಳರು ಪೊಲೀಸರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವು ಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವು

ಬೆಳಗಿನ ಜಾವ ಸುಮಾರು 3.30ರ ವೇಳೆ ಬೆಳ್ಳಂದೂರು ಪೊಲೀಸರು ಗಸ್ತು ತಿರುಗುತ್ತಿದ್ದಾಗ ಇಬ್ಬರು ಆರೋಪಿಗಳು ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದರು. ಪೊಲೀಸರಿಗೆ ಅನುಮಾನ ಬಂದು ಅವರನ್ನು ತಡೆದು ಪ್ರಶ್ನಿಸಿದಾಗ ಗಾಬರಿಗೊಂಡ ಕಳ್ಳರು ಪೊಲೀಸರ ಕಣ್ಣಿಗೆ ಕಾರದಪುಡಿ ಎರಚಿ ತಪ್ಪಿಸಿಕೊಳ್ಳಲು ಯತ್ನಿಸಿದರು ಆದರೆ ಪೊಲೀಸರು ಅವರನ್ನು ಹಿಡಿದು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಗಸ್ತು ಪಡೆ ಬೆಂಗಳೂರಲ್ಲಿ ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಗಸ್ತು ಪಡೆ

ಬೆಳಗಾವಿಯ ಮಂಜುನಾಥ್ ಪಾಟೀಲ್ ಹಾಗೂ ರಾಘವೇಂದ್ರ ಪಾಟೀಲ್ ಬಂಧಿತರು, ಪೊಲೀಸರು ಅವರನ್ನು ಹಿಡಿದ ಸಂದರ್ಭದಲ್ಲಿ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ, ಕೂಡಲೇ ಪೊಲೀಸ್ ತಮ್ಮ ಬಳಿ ಇದ್ದ ರೈಫಲ್ ಹಿಡಿದು ಬೆದರಿಸಿದಾಗ ಇಬ್ಬರೂ ಶರಣಾಗಿದ್ದಾರೆ.

ಬೆಂಗಳೂರು: ರಸ್ತೆಯಲ್ಲೆ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ ಬೆಂಗಳೂರು: ರಸ್ತೆಯಲ್ಲೆ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ

Pepper spray on police constables: Two bike lifters arrested

ಈ ಇಬ್ಬರು ಆರೋಪಿಗಳು ಕೆಲ ತಿಂಗಳ ಹಿಂದಷ್ಟೇ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು, ಹಣ ಗಳಿಸುವ ಉದ್ದೇಶದಿಂದ ಅಲ್ಲಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿಗಳ ಬಳಿ ಇದ್ದ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

English summary
Two bike lifters from Belgaum arrested who were sprayed pepper on police constables during bike lifting IB Bellanduru police station limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X