ಚಿತ್ರಗಳಲ್ಲಿ: ಕಾರ್ಗಿಲ್ ವೀರ ಯೋಧರಿಗೆ ನಮನ
ಬೆಂಗಳೂರು, ಜುಲೈ 26 : ದೇಶದ ಇತಿಹಾಸದಲ್ಲಿ ಜುಲೈ 26 ಮರೆಯಲಾರದ ದಿನ. ಪಾಕಿಸ್ತಾನದ ಮೇಲಿನ ಕಾರ್ಗಿಲ್ ವಿಜಯಕ್ಕೆ 17 ವರ್ಷ.
ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ಸಿಂಗ್ ಯೋಧರ ಸಮಾಧಿಗೆ ಗೌರವ ಸಲ್ಲಿಕೆ ಮಾಡಿದರು.[ಯೋಧರಿಗೆ ನಮನ ಸಲ್ಲಿಸಿದ ಟ್ವೀಟ್ ಲೋಕ]
ಬೆಂಗಳೂರಿನಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ ಮಾಡಿದರು.
ಸಿದ್ದರಾಮಯ್ಯ ನಮನ
ಬೆಂಗಳೂರಿನಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ ಮಾಡಿದರು.
ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ
ಸೈನಿಕರಿಗೆ ನಮನ ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಯೋಧರ ಸ್ಮರಣೆ
ಸೈನಿಕನ ಪುತ್ಥಳಿಗೆ ಪುಷ್ಪ ಅರ್ಪಣೆ ಮಾಡಲಾಯಿತು. ವಿದ್ಯಾರ್ಥಿಗಳು ರಾಷ್ಟ್ರಗೀತೆಗೆ ಶಿಸ್ತಿನಿಂದ ವಂದಿಸಿದರು.
ಪರಿಕ್ಕರ್ ನಮನ
ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ನಿಯೋಜಿಸಲಾಗಿದೆ ಎಂದು ಸೈನಿಕರಿಗೆ ನಮನ ಸಲ್ಲಿಕೆ ಮಾಡಿದ ನಂತರ ಪರಿಕ್ಕರ್ ಹೇಳಿದರು.
ವಿಮಾನ ಪತ್ತೆ ಚುರುಕು
ಕಣ್ಮರೆಯಾಗಿರುವ ಎಎನ್-32 ವಿಮಾನದ ಶೋಧ ಕಾರ್ಯ ಚುರುಕು ಮಾಡಲಾಗಿದೆ ಎಂದು ಇದೇ ವೇಳೆ ಪರಿಕ್ಕರ್ ತಿಳಿಸಿದರು.