ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿಗೆ ಹೊಸ ವಾಹನ ಖರೀದಿಗೆ ಬ್ರೇಕ್ ಹಾಕುತ್ತಾ ಸರ್ಕಾರ?

|
Google Oneindia Kannada News

Recommended Video

ದೀಪಾವಳಿ ಹಬ್ಬಕ್ಕೆ ಹೊಸ ವಾಹನ ಖರೀದಿಗೆ ಬ್ರೇಕ್ ಹಾಕುತ್ತಾ ಸರ್ಕಾರ? | Oneindia Kannada

ಬೆಂಗಳೂರು, ನವೆಂಬರ್ 2: ದೀಪಾವಳಿಗೆ ಹೊಸ ವಾಹನಗಳ ಖರೀದಿಗೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದೆ, ಈ ಕುರಿತು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಬಳಿ ಚರ್ಚಿಸುತ್ತೇನೆ ಎಂದಿದ್ದಾರೆ.

ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗುತ್ತಿದೆ ಜತೆಗೆ ವಾಯು ಮಾಲಿನ್ಯ ಪ್ರಮಾಣವೂ ಏರಿಕೆಯಾಗಿದ್ದು ಸಮೂಹ ಸಾರಿಗೆಯನ್ನು ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ. ಬೆಂಗಳೂರಲ್ಲಿ 75 ಲಕ್ಷ ವಾಹನಗಳಿವೆ. ಇನ್ನೂ ಹೆಚ್ಚಿನ ವಾಹನಗಳ ನೋಂದಣಿ ಮಾಡಿದರೆ ಟ್ರಾಫಿಕ್ ಸಮಸ್ಯೆ ಇನ್ನೂ ಹೆಚ್ಚಳವಾಗಲಿದೆ ಎನ್ನುವುದು ಉಪಮುಖ್ಯಮಂತ್ರಿಯವರ ವಾದವಾಗಿದೆ.

No new vehicles to combat traffic woes

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಈ ಹಿಂದೆ ಕಳೆದ ವಾರವಷ್ಟೇ ಶೀಘ್ರ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದರು ಆದರೆ ಸಾರಿ ಸಚಿವ ಡಿಸಿ ತಮ್ಮಣ್ಣ ಈ ವಿಚಾರವೇ ನನಗೆ ಗೊತ್ತಿಲ್ಲ ಎಂದಿದ್ದರು ಇದೀಗ ಮುಖ್ಯಮಂತ್ರಿ ಜತೆಗೆ ಸಭೆಗೆ ತಮ್ಮಣ್ಣ ಅವರನ್ನೂ ಕರೆದೊಯ್ಯುತ್ತಾರೋ ಅಥವಾ ಪರಮೇಶ್ವರ್ ಅವರೇ ನೇರವಾಗಿ ಸಭೆ ನಡೆಸುತ್ತಾರೋ ಎನ್ನುವುದು ಪ್ರಶ್ನೆಯಾಗಿದೆ. ವಾರಗಳ ಬಳಿಕ ಮತ್ತೆ ಈ ಸುದ್ದಿ ಹರಿದಾಡುತ್ತಿದೆ. ಹೊಸ ವಾಹನಗಳ ತಡೆಗೆ ಸರ್ಕಾರ ತಾತ್ಕಾಲಿಕ ತಡೆಯೊಡ್ಡಲಿದೆ.

English summary
Karnataka’s Deputy Chief Minister has come up with a solution to combat Bengaluru’s congested roads. The minister has suggested the suspension in the registering of 2 and 4-wheelers in the city for the next 2 years. Chief Minister Kumaraswamy plans to hold a meeting to discuss it further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X