ಸೋಮವಾರ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ
ಬೆಂಗಳೂರು, ಸೆ.7 : ರಾಸಲೀಲೆ ಪ್ರಕರಣದ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ಸೋಮವಾರ ಬೆಂಗಳೂರಿನಲ್ಲಿ ನಡೆಯಲಿದೆ. ಭಾನುವಾರ ಸಿಐಡಿ ಪೊಲೀಸರು ನಿತ್ಯಾನಂದನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಬಿಡದಿಯ
ನಿತ್ಯಾನಂದ
ಸ್ವಾಮಿ
ಪುರುಷತ್ವ
ಪರೀಕ್ಷೆಗೆ
ಒಳಪಡಲೇಬೇಕು
ಎಂದು
ಸುಪ್ರೀಂಕೋರ್ಟ್
ಈಗಾಗಲೇ
ತಿರ್ಪು
ನೀಡಿದೆ.
ಸೆ.8ರ
ಸೋಮವಾರ
ಬೆಳಗ್ಗೆ
9
ಗಂಟೆಗೆ
ವೈದ್ಯಕೀಯ
ಪರೀಕ್ಷೆ
ನಡೆಸಲು
ಸಿಐಡಿ
ಅಧಿಕಾರಿಗಳು
ತೀರ್ಮಾನ
ಕೈಗೊಂಡಿದ್ದು,
ವಿಕ್ಟೋರಿಯಾ
ಆಸ್ಪತ್ರೆಯಲ್ಲಿ
ಪುರುಷತ್ವ
ಪರೀಕ್ಷೆ
ನಡೆಯಲಿದೆ.
ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ನಡೆಸಲಿದೆ. ಸಿಐಡಿ ಪೊಲೀಸರು ಭಾನುವಾರ ಸಂಜೆ ನಿತ್ಯಾನಂದ ಸ್ವಾಮಿಯನ್ನು ವಶಕ್ಕೆ ಪಡೆದು, ಸೋಮವಾರ ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಹಾಜರುಪಡಿಸುವ ಸಾಧ್ಯತೆ ಇದೆ. [ಪುರುಷತ್ವ ಪರೀಕ್ಷೆ ತಪ್ಪಿಸಿಕೊಳ್ಳುವಂತಿಲ್ಲ]
ನಾನು ಗಂಡಸಲ್ಲ ಎಂದಿದ್ದ ಸ್ವಾಮೀಜಿ : ನಿತ್ಯಾನಂದ ಸ್ವಾಮೀಜಿ ವಿರುದ್ಧ ಅತ್ಯಾಚಾರದ ದೂರು ದಾಖಲಾದಾಗ ಸ್ವಾಮಿ ನಾನು ದೈಹಿಕವಾಗಿ ಬಾಲಾವಸ್ಥೆಯಲ್ಲಿದ್ದು, ಅತ್ಯಾಚಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರಿಂದ 2012ರ ಜೂ.18ರಂದು ರಾಮನಗರದ ಕೋರ್ಟ್ ನಿತ್ಯಾನಂದ ಸ್ವಾಮೀಯ ಪುರುಷತ್ವ ಪರೀಕ್ಷೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿತ್ತು. [ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಕೋರ್ಟ್ ಅಸ್ತು]
ರಾಮನಗರ ಕೋರ್ಟ್ ಆದೇಶವನ್ನು ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದ ನಿತ್ಯಾನಂದ ಸ್ವಾಮೀಜಿ ಕಾನೂನು ಹೋರಾಟದಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ಅಂತಿಮವಾಗಿ ಪುರುಷತ್ವ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಮವಾರ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.