ಕೊನೆ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾಯಿಸಿದ್ದು ಏಕೆ?
Recommended Video
ದೇವನಹಳ್ಳಿ ಏಪ್ರಿಲ್ 25 : ದೇವನಹಳ್ಳಿ ಕ್ಷೇತ್ರದಲ್ಲಿ 2018ರ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಳಗ್ಗೆ ಸುಮಾರು 10 ಗಂಟೆಗೆ ಪ್ರಾರಂಭವಾದ ಪ್ರಕ್ರಿಯೆ ಕೊನೆಯ 3 ಗಂಟೆ ವರೆಗೂ ಅಭ್ಯರ್ಥಿಗಳು ಉಮೇದಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ದಿನದಿಂದ ಕೊನೆಯ ದಿನ ಮಂಗಳವಾರದವರೆಗೂ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿವೆ. ಕೊನೆಯ ದಿನ ಒಂದೇ ದಿನವೇ 15 ಅಭ್ಯರ್ಥಿಗಳು ಚುನಾವಣೆ ಅಧಿಕಾರಿಗಳಿಗೆ ಉಮೇದಾರಿಕೆ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ದೇವೇಗೌಡ್ರು ಕೊಟ್ರು ಸಿ ಫಾರಂ
ನಾಮಪತ್ರ ಸಲ್ಲಿಸುವ ಕೊನೆಯ ದಿನ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರನ್ನು ಬದಲಿಸಿ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಸಿ ಫಾರಂ ನೀಡಿದ್ದಾರೆ. ಈ ಹಿಂದೆ ಜೆಡಿಎಸ್ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಬಿ ಫಾರಂ ನೀಡಿದ್ದರು.
ಪಕ್ಷದಿಂದ ಟಿಕೆಟ್ ಕೈ ತಪ್ಪಿದ ನಿಸರ್ಗ ನಾರಾಯಣಸ್ವಾಮಿ ಅವರು ಸೋಮವಾರ ತಮ್ಮ ಕುಟುಂಬ ಸಮೇತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಅಪಾರ ಕಾರ್ಯಕರ್ತರೊಂದಿಗೆ ಮಂಗಳವಾರ ಮತ್ತೊಂದು ನಾಮಪತ್ರ ಪಕ್ಷೇತರ ಅಭ್ಯರ್ಥಿಯಾಗಿಯೇ ಸಲ್ಲಿಸುವುದಾಗಿ ತಿಳಿಸಿದ್ದರು. ಆದರೆ ಮಂಗಳವಾರ ಮಧ್ಯಾಹ್ನ ಕೊನೆ ಗಳಿಗೆಯಲ್ಲಿ ದೇವೇಗೌಡ ಅವರಿಂದ ಸಿ ಫಾರಂ ಪಡೆದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಜೆಡಿಎಸ್ ನಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ.
ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ
ದೇವನಹಳ್ಳಿ
ಕ್ಷೇತ್ರದಿಂದ
ಪಕ್ಷೇತರ
ಅಭ್ಯರ್ಥಿಯಾಗಿ
ಸ್ಪರ್ಧೆ
ನಡೆಸಲು
ನಿಸರ್ಗ
ನಾರಾಯಣಸ್ವಾಮಿ
ಸಿದ್ಧರಾಗಿದ್ದರು.
ದೇವೇಗೌಡರು
ಹಾಲಿ
ಶಾಸಕ
ಪಿಳ್ಳಮುನಿಶಾಮಪ್ಪಗೆ
ಬಿ
ಫಾರಂ
ನೀಡಿದ್ದರು.
ಆದರೆ
ಚುನಾವಣೆ
ಅಧಿಕಾರಿಗಳಿಗೆ
ನಾಮಪತ್ರ
ಸಲ್ಲಿಸುವ
ಸಂದರ್ಭದಲ್ಲಿ
ಬೆಂಗಳೂರಿನಿಂದ
ದೇವೇಗೌಡರು
ನೀಡಿದ್ದ
ಸಿ
ಫಾರಂಗಾಗಿ
ಕಾದು
ಕುಳಿತ
ನಾರಾಯಣಸ್ವಾಮಿ
ಅವರು
ನಂತರ
ಜೆಡಿಎಸ್
ಅಭ್ಯರ್ಥಿಯಾಗಿ
ಉಮೇದಾರಿಕೆ
ಸಲ್ಲಿಸಿದರು.
ಚುನಾವಣೆಗೆ ನಾಮಪತ್ರ ಸಲ್ಲಿಸದವರೆಷ್ಟು ಇಲ್ಲಿದೆ ಪೂರ್ಣ ವಿವರ
ಕಾಂಗ್ರೆಸ್ ನಿಂದ ಬಂಡಾಯ ಅಭ್ಯರ್ಥಿಗಳು
ಮಾಜಿ ಶಾಸಕ ವೆಂಕಟಸ್ವಾಮಿಗೆ ಟಿಕೆಟ್ ನೀಡಿದ ಕಾರಣ ಮಂಗಳವಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಜಿಲ್ಲಾ ಪಂ ಉಪಾಧ್ಯಕ್ಷೆ ಪತಿ ಚಿನ್ನಪ್ಪ ಮತ್ತು ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಕೊನೆಯ ದಿನ ಬಿಜೆಪಿ ಅಭ್ಯರ್ಥಿ ಘೋಷಣೆ
ದೇವನಹಳ್ಳಿ
ವಿಧಾನಸಭಾ
ಕ್ಷೇತ್ರದಲ್ಲಿ
ಕಾಂಗ್ರೆಸ್
ಮತ್ತು
ಜೆಡಿಎಸ್
ಅಭ್ಯರ್ಥಿಗಳ
ಘೋಷಣೆ
ಮಾಡಲಾಗಿತ್ತು.
ಆದರೆ
ಮಂಗಳವಾರದವರೆಗೂ
ಬಿಜೆಪಿ
ಅಭ್ಯರ್ಥಿ
ಅಧಿಕೃತವಾಗಿರಲಿಲ್ಲ.
ಶನಿವಾರ
ರಾಜ್ಯ
ಬಿಜೆಪಿಯಿಂದ
ಕೆ.ನಾಗೇಶ್
ಅವರನ್ನು
ಅಂತಿಮಗೊಳಿಸಲಾಗಿತ್ತು.
ಆದರೆ
ಬಿ
ಫಾರಂ
ಮಾತ್ರ
ಪಕ್ಷದ
ವರಿಷ್ಠರ
ಬಳಿ
ಉಳಿಸಿಕೊಂಡಿದ್ದರು.
ನಾಮಪತ್ರ
ಸಲ್ಲಿಸಲು
ಒಂದು
ದಿನ
ಬಾಕಿ
ಇದ್ದಂತೆ
ಬಿ
ಫಾರಂ
ಕೆ.ನಾಗೇಶ್
ಗೆ
ನೀಡಿದ್ದರು.
ಕಳೆದ
ಎರಡು
ಮೂರು
ವರ್ಷಗಳಿಂದ
ಡಿ.ಆರ್
ನಾರಾಯಣಸ್ವಾಮಿ
ಪಕ್ಷ
ಸಂಘಟನೆ
ಮಾಡುವುದರೊಂದಿಗೆ
ಕ್ಷೇತ್ರದಲ್ಲಿ
ಬಿಜೆಪಿ
ಅಭ್ಯರ್ಥಿ
ಎಂದು
ಬಿಂಬಿಸಿಕೊಂಡಿದ್ದರು.
ಆದರೆ
ಕೊನೆ
ಗಳಿಗೆಯಲ್ಲಿ
ಕೆ.ನಾಗೇಶ್
ಗೆ
ನೀಡಿದ್ದರಿಂದ
ಡಿ.ಆರ್
ನಾರಾಯಣಸ್ವಾಮಿ
ಪಕ್ಷೇತರ
ಅಭ್ಯರ್ಥಿಯಾಗಿ
ನಾಮಪತ್ರ
ಸಲ್ಲಿಸಿದರು.
ತಹಸೀಲ್ದಾರ್
ಕನ್ನಡಿ
ಬಳಸಿದ
ಬಿಜೆಪಿ
ಅಭ್ಯರ್ಥಿ
ಅಭ್ಯರ್ಥಿಗಳು
ನಾಮಪತ್ರ
ಸಲ್ಲಿಸುವ
ಪ್ರಕ್ರಿಯೆಯಲ್ಲಿ
ಚುನಾವಣೆಯಲ್ಲಿ
ಕಾನೂನಿನ
ರೀತಿಯಲ್ಲಿ
ನಡೆದುಕೊಳ್ಳುತ್ತೇವೆ
ಎಂದು
ಪ್ರಮಾಣ
ವಚನ
ಮಾಡಬೇಕು.
ಆದರೆ
ಬಿಜೆಪಿ
ಅಭ್ಯರ್ಥಿಗೆ
ದೃಷ್ಠಿ
ದೋಷ
ಕಾರಣ
ತಹಸೀಲ್ದಾರ್
ಅವರ
ಕನ್ನಡಿ
ಬಳಸಿ
ಪ್ರಮಾಣ
ವಚನ
ಮಾಡಿದರು.