ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರುತ್ತರ ಪುಸ್ತಕ ಪ್ರಕಾಶನದಿಂದ ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 14: 'ನಿರುತ್ತರ ಪುಸ್ತಕ' ಎಂಬ ಪ್ರಕಾಶನ ಸಂಸ್ಥೆಯನ್ನು ಹೊಸ ಕನಸು ಮತ್ತು ಭರವಸೆಗಳೊಂದಿಗೆ ಉತ್ಸಾಹಿ ಯುವಕರು ಕಟ್ಟಿದ್ದಾರೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ.

ಇದರ ಸಲುವಾಗಿ ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ 'ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ' ವನ್ನು ಪ್ರತಿವರ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ.

 Niruttara publication to give Poornachandra Tejaswi award

ಈ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದ ಪುರಸ್ಕಾರಕ್ಕೆ ಕಾದಂಬರಿಯ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಕರು ಆಗಸ್ಟ್ 12, 2018ರ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ.

ನಿಯಮಗಳು:
*ಲೇಖಕರ ವಯಸ್ಸು 45 ವರ್ಷ ಮೀರಿರಬಾರದು
*ಕಾದಂಬರಿಯು ಬೇರೆಲ್ಲೂ ಪ್ರಕಟವಾಗಿರಬಾರದು
*ಹಸ್ತಪ್ರತಿಯ ಯಾವ ಭಾಗದಲ್ಲೂ ಲೇಖಕರ ಹೆಸರು ಮತ್ತು ಇತರೆ ಮಾಹಿತಿಗಳನ್ನು ನಮೂದಿಸಬಾರದು.
*ಕಾದಂಬರಿಗೆ ಪುಟಗಳ ಮಿತಿ ಇರುವುದಿಲ್ಲ.
*ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ
*ತೀರ್ಪಿನ ಮಧ್ಯೆ ಯಾವುದೇ ಪತ್ರವ್ಯವಹಾರವಿರುವುದಿಲ್ಲ

ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಯನ್ನು ನಿರುತ್ತರ ಪುಸ್ತಕ ಪ್ರಕಟಿಸಿರುತ್ತದೆ. ಪುರಸ್ಕಾರ ಐದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.

ಕಾದಂಬರಿಯನ್ನು ಕಳುಹಿಸಬೇಕಾದ ವಿಳಾಸ:
ನಿರುತ್ತರ ಪುಸ್ತಕ
ನಂ:13
ಒಂದನೇ ಮುಖ್ಯರಸ್ತೆ
ಎರಡನೇ ಅಡ್ಡರಸ್ತೆ
ಮಲ್ಲತ್ತಹಳ್ಳಿ
ಬೆಂಗಳೂರು-56

English summary
Niruttara publication has invited fresh novels by writers from across Karnataka to send in entries for Poornachandra Tejaswi award. Entries should reach the publication address latest by August 12,2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X