ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ

By Manjunatha
|
Google Oneindia Kannada News

Recommended Video

ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ | Oneindia Kannada

ಬೆಂಗಳೂರು, ಜೂನ್ 27: ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು 9 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅದೀನ ಕಾರ್ಯದರ್ಶಿ ನಿನ್ನೆ ಈ ಆದೇಶ ಹೊರಡಿಸಿದ್ದು, 9 ಐಎಎಸ್ ಅಧಿಕಾರಿಗಳು ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಬೇಕಿದೆ.

ಖಾತೆ ಹಂಚಿಕೆ ಬೆನ್ನಲ್ಲೇ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆಖಾತೆ ಹಂಚಿಕೆ ಬೆನ್ನಲ್ಲೇ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯವಾಗಿ ಇ.ವಿ.ರಮಣ ರೆಡ್ಡಿ ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಲಾಗಿದೆ. ಅಬಕಾರಿ ಆಯುಕ್ತರಾದ ಮೌನೀಶ್ ಮೌದ್ಗೀಲ್ ಅವರನ್ನು ಸರ್ವೆ ಮತ್ತು ಭೂ ಇಲಾಖೆಗೆ ವರ್ಗ ಮಾಡಲಾಗಿದೆ.

Nine IAS officers has been transferred by government

ಸರ್ಕಾರ ಅಸ್ಥಿತ್ವಕ್ಕೆ ಬಂದಾಗಲೇ 4 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಲೋಕಾಯುಕ್ತ ಇಲಾಖೆಯಲ್ಲಿ ಕೂಡ ಒಂದೇ ದಿನ 19 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮತ್ತೆ ನಿಯುಕ್ತಿಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮತ್ತೆ ನಿಯುಕ್ತಿ

ವರ್ಗಾವಣೆ ಮಾಡಲಾಗಿರುವ ಅಧಿಕಾರಿಗಳ ಪಟ್ಟಿ ಇಂತಿದೆ.

ಡಾ.ಇ.ವಿ.ರಮಣ ರೆಡ್ಡಿ - ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಮೌನೀಶ್ ಮೌದ್ಗಿಲ್ - ಆಯುಕ್ತರು, ಸರ್ವೆ ಮತ್ತು ಭೂದಾಖಲೆ, ಬೆಂಗಳೂರು
ಬಿ.ಎ.ಶೇಖರಪ್ಪ - ಕಾಡಾ ನಿರ್ದೇಶಕರು
ಬಿ.ಎಂ.ವಿಜಯಶಂಕರ್ - ಬೆಂಗಳೂರು ಜಿಲ್ಲಾಧಿಕಾರಿ
ನಿತೇಶ್ ಪಟೇಲ್- ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
ಎಂ ಲಕ್ಷ್ಮಿನಾರಾಯಣ - ಹೆಚ್ಚುವರಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಕಪಿಲ್ ಮೋಹನ್ - ಡಿಜಿ ಆಡಳಿತ ಮತ್ತು ತರಬೇತಿ ಸಂಸ್ಥೆ, ಮೈಸೂರು
ಟಿ.ಕೆ.ಅನಿಲ್ ಕುಮಾರ್- ವಸತಿ ಇಲಾಖೆ ಕಾರ್ಯದರ್ಶಿ
ನಳಿನಿ ಅತುಲ್- ಕೆಯುಐಡಿಎಫ್‌ಸಿ, ಜಂಟಿ ವ್ಯವಸ್ಥಾಪಕ ನಿರ್ದೇಶಕಿ

English summary
nine IAS officers has been transferred by state government. EV Ramana Reddy appointed as CM's chief secretary. BM Vijayashankar appointed as Bengaluru DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X