ಉಕ್ಕಿನ ಸೇತುವೆ ನಿರ್ಮಾಣಕ್ಕೆ ಜನವರಿ 18ರ ತನಕ ಬ್ರೇಕ್
ರ್ನಾಟಕ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಮೇಲೆ ನೀಡಿರುವ ತಡೆಯಾಜ್ಞೆಯನ್ನು ಜನವರಿ 18ರ ತನಕ ವಿಸ್ತರಿಸಿ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಮೇಲೆ ನೀಡಿರುವ ತಡೆಯಾಜ್ಞೆಯನ್ನು ಜನವರಿ 18ರ ತನಕ ವಿಸ್ತರಿಸಿ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಮಂಗಳವಾರ ಆದೇಶ ಹೊರಡಿಸಿದೆ. ಆದರೆ, ಬಿಡಿಎ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಪ್ರಾಧಿಕಾರ, ಪ್ರಾಥಮಿಕ ಕಾಮಗಾರಿಗೆ ಅನುಮತಿ ನೀಡಿದೆ.
ಕರ್ನಾಟಕ
ಸರ್ಕಾರದ
ಉದ್ದೇಶಿತ
ಬಹುಕೋಟಿ
ಉಕ್ಕಿನ
ಸೇತುವೆ(Steel
Flyover)
ನಿರ್ಮಾಣ
ಸದ್ಯಕ್ಕೆ
ಕೈಗೆತ್ತಿಕೊಳ್ಳುತ್ತಿಲ್ಲ,
ಆದರೆ,
ಪ್ರಾಥಮಿಕ
ಕಾಮಗಾರಿ
ಕೈಗೊಳ್ಳಲು
ಅನುಮತಿ
ನೀಡುವಂತೆ
ಬೆಂಗಳೂರು
ಅಭಿವೃದ್ಧಿ
ಪ್ರಾಧಿಕಾರ
(ಬಿಡಿಎ)
ಕೋರಿದ್ದ
ಅರ್ಜಿಯನ್ನು
ಎನ್
ಜಿಟಿ
ಪುರಸ್ಕರಿಸಿದೆ.
ಇದರಿಂದ
ಮಣ್ಣಿನ
ಸ್ಯಾಂಪಲ್
ತೆಗೆದುಕೊಳ್ಳುವುದು
ಮುಂತಾದ
ಕಾರ್ಯಗಳನ್ನು
ಆರಂಭಿಸಬಹುದಾಗಿದೆ.[ಉಕ್ಕಿನ
ಸೇತುವೆ
ಬಗ್ಗೆ
ಫೇಸ್ಬುಕ್
ಸ್ಟೇಟಸ್
ಎಸ್ಐ
ಇನ್
ಟ್ರಬಲ್]
ಬೆಂಗಳೂರಿನ ನಾಗರಿಕರ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು, ಪ್ರಾಧಿಕಾರ, ಮುಂದಿನ ವಿಚಾರಣೆ ತನಕ(ಜನವರಿ 18, 2017) ರ ತನಕ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಿ, ವಿಚಾರಣೆಯನ್ನು ಮುಂದೂಡಿದೆ.
ಸುಮಾರು 6.7 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ1,761 ಕೋಟಿ ರು ಎಂದು ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ.ಸ್ಟೀಲ್ ಫ್ಲೈಓವರ್ ಬೇಕು ಹಾಗೂ ಬೇಡ ಎಂದು ನಾಗರಿಕರು ನಡೆಸಿದ ಪ್ರತಿಭಟನೆಗಳು, ಅಹವಾಲುಗಳನ್ನು ಪ್ರಾಧಿಕಾರ ಪರಿಶೀಲಿಸಿದೆ.