ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್
ಬೆಂಗಳೂರು, ಜನವರಿ 01: ಬೆಂಗಳೂರಿನಲ್ಲಿ ಒಂದು ಕಡೆ 2018ನ್ನು ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿ ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರೆ, ಮತ್ತೊಂದಡೆ ಕ್ಷುಲ್ಲಕ ಕಾರಣಗಳಿಗೆ ಕುಡಿದ ಮತ್ತಿನಲ್ಲಿ ಮೂರು ಕೊಲೆಗಳು ನಡೆದಿರುವುದು ಅತ್ಯಂತ ದುಃಖಕರ ಸಂಗತಿ.
ಕೇಕ್ ಕತ್ತರಿಸುವಾಗ ಜಗಳ: ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಕೊಲೆ
ಹೊಸ ವರ್ಷ ಆಚರಣೆಯ ಸಂಭ್ರಮದ ಅಮಲಿನಲ್ಲಿ ಭಾನುವಾರ ಮಧ್ಯರಾತ್ರಿ ನಗರದ ಬೊಮ್ಮನಹಳ್ಳಿ, ಜೆಪಿ ನಗರ ಹಾಗೂ ಜಯನಗರದಲ್ಲಿ ಹತ್ಯೆಗಳು ನಡೆದಿವೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿಯ ವರ್ಷಾಚರಣೆ ವೇಳೆ ಮಹಿಳೆಯರ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಆಗಿರುವ ಘಟನೆ ನಡೆದಿಲ್ಲ. ಎಲ್ಲವೂ ಸುಸೂತ್ರವಾಗಿ ವರ್ಷಾಚರಣೆ ನಡೆದಿದೆ. ಆದರೆ, ನಗರದಲ್ಲಿ ಈ ಮೂರು ಕೊಲೆಗಳು ಮಾತ್ರ ನಿಜಕ್ಕೂ ಆಘಾತ ತಂದಿದೆ.
ಬೆಳ್ಳಂದೂರಿನಲ್ಲಿ ಕೊಲೆ: ಹೊಸ ವರ್ಷಾಚರಣೆ ಸಂಭ್ರದಲ್ಲಿ ಕೇಕ್ ಕತ್ತರಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಸ್ನೇಹಿತರೇ ಯುವಕನೊರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವರಾಮ್ (30) ಕೊಲೆಯಾದ ಯುವಕ. ಈ ಸಂಬಂಧ ಬೆಳ್ಳಂದೂರು ಪೊಲೀಸರು ಏಳು ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಜಯನಗರ: ಕುಡಿದ ಮತ್ತಿನಲ್ಲಿ ಅಮಿತ್ (22) ಎನ್ನುವ ಯುವಕನ್ನು ಗೆಳೆಯರೇ ಹತ್ಯೆ ಮಾಡಿರುವ ಘಟನೆ ಜಯನಗರದ ಶಾಕಂಬರಿ ನಗರದಲ್ಲಿ ನಡೆದಿದೆ.
ಜೆಪಿ ನಗರ: ಕ್ಷುಲ್ಲಕ ಕಾರಣಕ್ಕೆ ಗೆಳೆಯರು ಸೇರಿಕೊಂಡು ಹೇಮಂತ್ ಎನ್ನುವಾತನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನೆಲಮಂಗಲ: ಇಲ್ಲಿನ ಶಿವಗಂಗೆ ದೇವಾಲಯದ ನೀರಿನ ಟ್ಯಾಂಕಿನಲ್ಲಿ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.