ಪಂಡರಾಪುರ, ರೆಣಿಗುಂಟಕ್ಕೆ ನೂತನ ಎಕ್ಸ್ಪ್ರೆಸ್ ರೈಲು ಆರಂಭ
ಬೆಂಗಳೂರು, ಮೇ 26: ಯಶವಂತಪುರದಿಂದ ಪಂಡರಾಪುರಕ್ಕೆ ನೈಋತ್ಯ ವಿಭಾಗೀಯ ರೈಲ್ವೆ ನೂತನ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಆರಂಭಿಸುತ್ತಿದೆ. ಇದು ಯಶವಂತಪುರದಿಂದ ಪಂಡರಾಪುರ-ಯಶವಂತಪುರ ಅದೇ ರೀತಿ ಯಶವಂತಪುರ-ಹುಬ್ಬಳ್ಳಿ-ಯಶವಂತಪುರ, ಮೈಸೂರು-ರೆಣಿಗುಂಟ-ಮೈಸೂರು ಮಾರ್ಗವಾಗಿ ಸಂಚಾರ ಆರಂಭಿಸಲಿದೆ.
ಈ ರೈಲುಗಳು ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸಲಿದ್ದು ಜೂನ್ 1ರ ನಂತರ ಯಶವಂತಪುರ, ಜೂನ್ 2ರ ನಂತರ ಮೈಸೂರಿನಿಂದ ಸಂಚಾರ ಆರಂಭಿಸಲಿದೆ. ಮೈಸೂರು-ರೆಣಿಗುಂಟ ರೈಲು ಪ್ರತಿ ವಾರದ ಕೊನೆ ದಿನ ಶುಕ್ರವಾರ ಸಂಜೆ 5.50ಕ್ಕೆ ರೆಣಿಗುಂಟದಿಂದ ಹೊರಟು ಶನಿವಾರ ಬೆಳಗ್ಗೆ 3.15ಕ್ಕೆ ಮೈಸೂರು ಮೈಸೂರು ತಲುಪಲಿದೆ. ಅದೇ ರೀತಿ ಯಶವಂತಪುರದಿಂದ ಪ್ರತಿ ಗುರುವಾರ ಸಂಜೆ 6ಕ್ಕೆ ಹೊರಡುವ ರೈಲು ಶುಕ್ರವಾರ ಬೆ.11.45ಕ್ಕೆ ಪಂಡರಾಪುರ ತಲುಪಲಿದೆ.
ರೈಲು ರದ್ದಾದರೆ ನಿಮ್ಮ ಖಾತೆಗೆ ಆಟೋಮ್ಯಾಟಿಕ್ ರೀಫಂಡ್
ಪ್ರತಿ ಶುಕ್ರವಾರ ಯಶವಂತಪುರದಿಂದ ಹೊರಡುವ ಎಕ್ಸ್ಪ್ರೆಸ್ ಶನಿವಾರ ಬೆಳಗಿನ ಜಾವ 5.20ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ. ಪ್ರಯಾಣಿಕರು ಇದರ ಸದುಪಯೋಗಪಡೆದುಕೊಳ್ಳಿ ಎಂದು ರೈಲ್ವೆ ಇಲಾಖೆ ತಿಳಿಸಿದೆ.