ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹರಟೆ ಮಲ್ಲರಿಂದ ಜಯನಗರದಲ್ಲಿ 'ನಮೋ ಹರಟೆ'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29: ಹರಟೆ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಚಿರಪರಿಚಿತರಾಗಿರುವ ಹಿರೆಮಗಳೂರು ಕಣನ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 'ನಮೋ ಹರಟೆ' ನಡೆಯಲಿದೆ.

ಸೆಪ್ಟೆಂಬರ್ 29ರಂದು ಸಂಜೆ 5 ಗಂಟೆಗೆ ಜಯನಗರ ಮೂರನೇ ಹಂತದ, ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿರೇಮಗಳೂರು ಕಣ್ಣನ್ ಅವರ ಜೊತೆಗೆ ಶಕುಂತಲಾ ಐಯರ್, ಗಿರಿಧರ ಉಪಾಧ್ಯಾಯ, ಶ್ರೆಯಾಂಕ ರಾನಡೆ, ಅಕ್ಷತಾ ಭಾಜಪೆ ಅವರು ಇರಲಿದ್ದಾರೆ.

Namo Harate organized in Jayangara on September 29

ನಮೋ ಭರತ್‌ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪ್ರವೇಶ ಉಚಿತವಾಗಿದೆ. ನರೇಂದ್ರ ಮೋದಿ ಅವರ ಬಗ್ಗೆ ಸೃಜನಾತ್ಮಕ ಮಾತುಕತೆಗಳು ವೇದಿಕೆಯಲ್ಲಿ ನಡೆಯಲಿವೆ.

ಕನ್ನಡ ಪೂಜಾರಿ ಎಂದೇ ಕರೆಯಲಾಗುವ ಹಿರೇಮಗಳೂರು ಕಣ್ಣನ್ ಅವರು ತಮ್ಮ ಹಾಸ್ಯ ಮಿಶ್ರಿತ ವಿಡಂಬನೆಗಳಿಗೆ ಬಹು ಖ್ಯಾತರು. ಅವರ ಮಾತಿನಲ್ಲಿ ಮೋದಿ ಅವರ ವ್ಯಕ್ತಿತ್ವ, ಕಾರ್ಯಗಳು ಹೇಗೆ ಹೊಸ ರೂಪ ಪಡೆದುಕೊಳ್ಳುತ್ತವೆ ಎಂಬ ಕುತೂಹಲ ಇರುವವರು ಕಾರ್ಯಕ್ರಮಕ್ಕೆ ಭೇಟಿ ನೀಡಬೇಕು.

English summary
'Namo Harate' program organized by Namo Bharat in Jayanagar today evening at 5 PM. Hiremagaluru Kannan will be the key speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X