ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್ನಲ್ಲಿ ಯಾವುದೇ ದೋಷವಿಲ್ಲ: ಪರಮೇಶ್ವರ
ಬೆಂಗಳೂರು, ಡಿಸೆಂಬರ್ 15: ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್ನಲ್ಲಿ ಯಾವುದೇ ದೋಷವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ
ಶನಿವಾರ ನಮ್ಮ ಮೆಟ್ರೋದಲ್ಲಿ ಸಂಚರಿಸಿ ಮೆಟ್ರೋ ನಿಲ್ದಾಣ ಪರಿಶೀಲನೆ ನಡೆಸಿದ ಅವರು, ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್ನಲ್ಲಿ ಯಾವುದೇ ದೋಷವಿಲ್ಲ, ಕಾಂಕ್ರೀಟ್ ಹಾಕುವಾಗ ಸ್ವಲ್ಪ ಟೊಳ್ಳಾಗಿದೆ ಎಂದು ಹೇಳಿದರು.
ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?
ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಎಂನಿಜಿಯರ್ಗಳು ಬಂದಿದ್ದಾರೆ. ಎಂಜಿನಿಯರ್ಗಳ ಜೊತೆ ಮಾತುಕತೆ ನಡೆಸಿದ್ದೇನೆ, ಇಂದು ಸಂಜೆಯಿಂದ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಟ್ರಿನಿಟಿ ವೃತ್ತದ ಬಳಿ ಇರುವ 155ನೇ ನಂಬರ್ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹಬ್ಬಿತ್ತು ಈ ಕುರಿತು ಎರಡು ದಿನಗಳ ಕಾಲ ಬಿಎಂಆರ್ಸಿಎಲ್ ಎಂಜಿನಿಯರ್ಗಳು ತಪಾಸಣೆ ನಡೆಸಿದ್ದರು, ಹೆಚ್ಚಿನ ತಪಾಸಣೆಗಾಗಿ ದೆಹಲಿಯಿಂದ ಎಂಜಿನಿಯರ್ಗಳು ಕರೆಸಲಾಗಿದೆ.
ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್ಸಿಎಲ್ ಮನವಿ
ತಪಾಸಣೆ ನಡೆಯುವ ಕಾರಣ ಎರಡು ದಿನಗಳ ಕಾಲ ಎಂಜಿ ರಸ್ತೆಯಿಂದ ಇಂದಿರಾನಗರದವರೆಗ ಮೆಟ್ರೋ ಸಂಚಾರ ಸ್ಥಗಿತಗೊಳ್ಳುತ್ತಿದ್ದು, ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಇಂದಿರಾನಗರದ ವರೆಗೆ ಬಿಎಂಟಿಸಿ ಉಚಿತ ಬಸ್ ಸೇವೆ ಕಲ್ಪಿಸಿಕೊಡಲಾಗಿದೆ.