ಶ್ರೀರಾಮುಲಿಗೆ ಚೆಕ್ ಬೌನ್ಸ್ ಪ್ರಕರಣದಿಂದ ಮುಕ್ತಿ
ಬೆಂಗಳೂರು, ನವೆಂಬರ್ 09: ಬಳ್ಳಾರಿಯ ಸಂಸದ ಬಿ ಶ್ರೀರಾಮುಲು ಅವರಿಗೆ ಚೆಕ್ ಬೌನ್ಸ್ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. 13ನೇ ಎಸಿಎಂಎಂ ನ್ಯಾಯಾಲಯವು ಈ ಪ್ರಕರಣದಿಂದ ಶ್ರೀರಾಮುಲು ಅವರನ್ನು ಖುಲಾಸೆಗೊಳಿಸಿದೆ.
2013ರಲ್ಲಿ
ಮೈಸೂರಿನ
ಎಲ್.ಸೋಮಣ್ಣ
ಎಂಬುವರು
ಶ್ರೀರಾಮುಲು
ವಿರುದ್ಧ
ವಂಚನೆ
ಪ್ರಕರಣ
ದಾಖಲಿಸಿದ್ದರು.
ಆದರೆ,
ಆರೋಪ
ಸಾಬೀತುಪಡಿಸಲು
ಸರಿಯಾದ
ಸಾಕ್ಷಿ
ಆಧಾರಗಳನ್ನು
ಒದಗಿಸುವಲ್ಲಿ
ವಿಫಲರಾಗಿದ್ದರು.
ಹೀಗಾಗಿ,
ಪ್ರಕರಣದಿಂದ
ಶ್ರೀರಾಮುಲು
ಅವರನ್ನು
ನ್ಯಾಯಾಲಯವು
ದೋಷಮುಕ್ತಗೊಳಿಸಿದೆ.
ಏನಿದು ಪ್ರಕರಣ: 'ಬಿಎಸ್ಆರ್ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಶ್ರೀರಾಮುಲು ಅವರು ನನ್ನಿಂದ 2.96 ಕೋಟಿ ರು ಸಾಲ ಪಡೆದಿದ್ದರು. ಸಾಲ ತೀರಿಸಲು ಚೆಕ್ ನೀಡಿದ್ದರು. ಆದರೆ, ಬ್ಯಾಂಕಿನಲ್ಲಿ ಚೆಕ್ ಕ್ಲಿಯರ್ ಆಗದೆ ಚೆಕ್ ಬೌನ್ಸ್ ಆಗಿತ್ತು' ಎಂದು ಮೈಸೂರು ಎಲ್ ಸೋಮಣ್ಣ ಆರೋಪ ಹೊರೆಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ಬಳಿಕ ಈಗ ತೀರ್ಪು ಹೊರ ಬಂದಿದ್ದು, ಶ್ರೀರಾಮುಲು ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇನ್ನೊಂದು ಪ್ರಕರಣದಲ್ಲಿ ಶ್ರೀರಾಮುಲು: ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ, ಬಳ್ಳಾರಿ ಹೊರವಲಯದ ಬೆಳಗಲಿ ಪ್ರದೇಶದಲ್ಲಿ 27.25 ಎಕರೆ ಭೂಮಿ ಖರೀದಿಸಿದ್ದರು. ತಮ್ಮ ಪ್ರಭಾವ ಮತ್ತು ನಕಲಿ ದಾಖಲೆ ಉಪಯೋಗಿಸಿಕೊಂಡು, ರಾಮುಲು ಭೂಮಿ ಖರೀದಿಸಿದ್ದಾರೆ ಎಂಬುದು ಆರೋಪಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.