ಬೆಂಗಳೂರಲ್ಲಿ ಕಡಿಮೆಯಾದ ಮಳೆ: ಚಳಿ ಪ್ರಮಾಣ ಹೆಚ್ಚಳ
ಬೆಂಗಳೂರು, ಜೂನ್ 11: ರಾಜ್ಯಾದ್ಯಂತ ಕಳೆದ ಎರಡು ವಾರಗಳಿಂದ ಮುಂಗಾರು ಮಳೆ ಆರಂಭವಾಗಿದೆ. ನೈಋತ್ಯ ಮುಂಗಾರು ಚಳಿಯನ್ನೂ ಹೊತ್ತು ತಂದಿದೆ. ಜೂ.1ರಿಂದ ಇಲ್ಲಿಯವರೆಗೆ 32.ಮಿ.ಮೀನಷ್ಟು ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ. ಇನ್ನೂ ಎರಡು ದಿನ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬೇರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಮುಂಗಾರು: ಮಹಾರಾಷ್ಟ್ರ, ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸಂಭವ
ನಗರದಲ್ಲಿ ಮುಂಗಾರು ಆಗಮನದ ದಿನಗಳಲ್ಲಿ ಇದೇ ರೀತಿ ಮೇ ಹಾಗೂ ಏಪ್ರಿಲ್ನಲ್ಲಿ ಪೂರ್ವ ಮುಂಗಾರು ಮಳೆಯೂ ಅಬ್ಬರದಿಂದ ಸುರಿದಿತ್ತು. ಆದರೆ ಮುಂಗಾರು ಬರಬರುತ್ತಾ ತೀವ್ರತೆ ಕಳೆದುಕೊಳ್ಳುತ್ತಿದ್ದು, ತುಂತುರು ಮಳೆ ಮಾತ್ರ ಸುರಿಯುತ್ತಿದೆ.
ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ, ಇಡೀ ದಿನ ಮೋಡ ಕವಿದ ವಾತಾವರಣವಿರುವುದರಿಂದ ಚಳಿ ಹೆಚ್ಚಾಗುತ್ತಿದೆ. ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ನಗರದ ಗರಿಷ್ಠ ತಾಪಮಾನ ಕಡಿಮೆಯಾಗುತ್ತಿದ್ದು, ಚಳಿ ಆರಂಭವಾಗಿದೆ.
ನಗರದ ಕೇಂದ್ರ ಭಾಗದಲ್ಲಿ ಗರಿಷ್ಠ 25.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21ಡಿಗ್ರಿ ಸೆಲ್ಸಿಯಸ್, ಕೆಐಎಲ್ನಲ್ಲಿ ಗರಿಷ್ಠ 27.2ಡಿಗ್ರಿ ಸೆಲ್ಸಿಯಸ್, ಕನಿಷ್ಠ 21ಡಿಗ್ರಿ ಸೆಲ್ಸಿಯಸ್, ಎಚ್ಎಲ್ನಲ್ಲಿ ಗರಿಷ್ಠ 26.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.8ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನೂ ಒಂದು ವಾರಗಳ ಕಾಲ ಇದೇ ರೀತಿ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 12ರವರೆಗೂ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.