ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪ್ರವಾಹ, ಸಂಸದರಿಂದ ವರದಿ ಕೇಳಿದ ಪ್ರಧಾನಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಕೊಡಗು, ದಕ್ಷಿಣ ಕನ್ನಡದಲ್ಲಿ ಆಗಿರುವ ಪ್ರವಾಹದ ಕುರಿತು ರಾಜ್ಯದ ಸಂಸದರಿಂದ ಪ್ರಧಾನಿ ನರೇಂದ್ರ ಮೋದಿಯವರು ವರದಿ ಕೇಳಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದ್ದಾರೆ.

ನೆರೆ ಪೀಡಿತ ಪ್ರದೇಶಗಳು, ಸಂತ್ರಸ್ತರನ್ನು ಭೇಟಿ ಮಾಡಿ ಮಾತನಾಡಿಸಿ ವರದಿ ನೀಡುವಂತೆ ರಾಜ್ಯ ಸಂಸದರಿಗೆ ವರದಿ ನೀಡಲು ಮೋದಿ ಸೂಚಿಸಿದ್ದಾರೆ, ಕೊಡಗು ಜಿಲ್ಲೆಯ ನೆರೆಪೀಡಿತ ಪ್ರದೇಶಗಳ ಜನರ ಬಳಿ ಮಾತುಕತೆ ನಡೆಸಿದ್ದೇನೆ.

ಕೊಡಗು ಪ್ರವಾಹ : ಕುಮಾರಸ್ವಾಮಿಗೆ ಮೋದಿ ಫೋನ್ ಕರೆಕೊಡಗು ಪ್ರವಾಹ : ಕುಮಾರಸ್ವಾಮಿಗೆ ಮೋದಿ ಫೋನ್ ಕರೆ

ಸೇನಾಧಿಕಾರಿಗಳು, ಎನ್‌ಡಿಆರ್‌ಎಫ್‌ ಹಾಗೂ ಸಿಎಂ ಜತೆಗೂ ಸಮಾಲೋಚನೆ ನಡೆಸಿದ್ದೇವೆ, ರಸ್ತೆ ದುರಸ್ತಿ ಸೇರಿ ನೆರೆ ಪೀಡಿತ ಪ್ರದೇಶದಗಳಲ್ಲಿ ಸಾಕಷ್ಟು ಕೆಲಸ ಬಾಕಿ ಇದೆ, ಕೊಡಗು ಜಿಲ್ಲೆಯಲ್ಲಿ ಗುರುತು ಸಿಗದಂತೆ 30 ಗ್ರಾಮಗಳು ಕಾಣೆಯಾಗಿವೆ, ಕೊಡಗು ಜಿಲ್ಲೆಯಾದ್ಯಂತ ಬೆಳೆದಿದ್ದ ಕಾಫಿ ತೋಟಗಳು ನಾಶವಾಗಿದೆ.

Modi asks report on Kodagu flood from MPs

ಸಂತ್ರಸ್ತರ ಆರೋಗ್ಯ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಕಲ್ಪಿಸಲಾಗುತ್ತದೆ, ಮನೆ ಕಳೆದುಕೊಂಡವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮನೆ ನಿರ್ಮಿಸಿಕೊಡಲಾಗುತ್ತದೆ ಎಂದು ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!

ಸಧ್ಯಕ್ಕೆ ಸ್ವಲ್ಪ ಮಟ್ಟಿಗೆ ಕೊಡಗು, ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆಯಾಗಿದೆ, ಆದಷ್ಟು ಬೇಗ ಅವರಿಗೆ ವಸತಿ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

English summary
Union minister D.V. Sadananda Gowda has said prime minister Narendra Modi was asked report from him and other members of parliament in the state as well about rain and flood damages in Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X