ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಸಲೀಲೆ ಪ್ರಕರಣ, ಸಿಡಿ ಬಹಿರಂಗ ಪಡಿಸಿದರೆ ತಕ್ಷಣ ಕ್ರಮ: ಸಿಎಂ

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಎಚ್.ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದು ಸಿಡಿ ಬಹಿರಂಗ ಪಡಿಸಲಿ ತಕ್ಷಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸರಕಾರದ ಸಚಿವರೊಬ್ಬರು ರಾಸಲೀಲೆ ನಡೆಸಿದ್ದಾರೆ. ಅದರ ಸಂಬಂಧ ವಿಡಿಯೋ ನನ್ನ ಬಳಿಯಿದೆ ಎಂದು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ತಿಳಿಸಿದ್ದರು. ಜೊತೆಗೆ ಸಿಡಿ ಬಿಡುಗಡೆ ಮಾಡಿದರೆ ಪ್ರಾಣ ಬೆದರಿಕೆ ಇರುವುದಾಗಿ ಆಡಿಯೋ ಎಲ್ಲೆಡೆ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಸಿಡಿಗಾಗಿ ಹಣದ ವ್ಯವಹಾರವನ್ನು ಮಹಿಳೆಯೊಬ್ಬರು ನಡೆಸಿದ್ದು, ಐದು ಪೈಸೆ ಕೊಡೋಲ್ಲಾ ಏನಾದರೂ ಮಾಡಿಕೋ ಹೋಗ್ ಎಂದು ಸಚಿವರು ಅವಾಜ್ ಹಾಕಿದ್ದರು.[ಸಿದ್ದು ಸರಕಾರದ ಕ್ಯಾಬಿನೆಟ್ ಸಚಿವರೊಬ್ಬರ ರಾಸಲೀಲೆ ಬಯಲು?]

Meti Sex scandal: cm says release CD will take action

ಪ್ರಸ್ತುತ ರಾಜಶೇಖರ್ ಮಾಧ್ಯಮದ ಮುಂದೆ ಬಂದಿದ್ದು, ಆ ವಿಡಿಯೋ ನೋಡಲಸಾಧ್ಯವಾದ ರೀತಿಯಲ್ಲಿದೆ. ಜನಪ್ರತಿನಿದಿಗಳು ಈ ರೀತಿ ಮಾಡುವುದು ತರವಲ್ಲ ಶೀಘ್ರವೇ ರಾಜಿನಾಮೆ ನೀಡಬೇಕು ಎಂದು ಹೇಳಿದರು.[ಮೇಟಿಯನ್ನು ವಜಾ ಮಾಡಲಿ : ಸಿದ್ದುಗೆ ಪೂಜಾರಿ ಸವಾಲ್]

ಬೆಂಗಳೂರಿನಲ್ಲಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಸಿಡಿ ಬಹಿರಂಗ ಪಡಿಸಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

English summary
H Y Meti, Excise minister of Siddaramaiah government middle of sex scandal controversy, cm siddaramaiah says release the CD after will take the action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X