ಮೆಟ್ರೋ ಅಧಿಕಾರಿಗಳಿಗೆ ನೋಟಿಸ್ ನೀಡಿದ ಮಂಜುಳಾ
ಬೆಂಗಳೂರು, ಡಿ. 3: ಮೆಟ್ರೋ ರೈಲು ನಿಲ್ದಾಣದ ಅಧಿಕಾರಿಗಳಿಬ್ಬರು ತಮ್ಮೊಂದಿಗೆ ಅನುಚಿತ ವರ್ತನೆ ತೋರಿದ್ದಾರೆಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ನೋಟಿಸ್ ಜಾರಿ ಮಾಡಿದ್ದಾರೆ.
ಮಹಿಳೆಯರೊಬ್ಬರು ದೂರು ನೀಡಿದ್ದರಿಂದ ಪರಿಶೀಲನೆಗೆಂದು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಕ್ಕೆ ತೆರಳಿದ್ದೆ. ಈ ಸಂದರ್ಭದಲ್ಲಿ ನಿಲ್ದಾಣದಲ್ಲಿರುವ ಇಬ್ಬರು ಅಧಿಕಾರಿಗಳು ನನಗೆ ಪ್ರವೇಶ ನಿರ್ಬಂಧಿಸಿದರು. ಅಲ್ಲದೆ, ಅನುಚಿತವಾಗಿ ವರ್ತಿಸಿದರು ಎಂದು ಮಂಜುಳಾ ಮಾನಸ ಆರೋಪಿಸಿದ್ದಾರೆ. [ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ]
ಅಲ್ಲದೆ, ಇಬ್ಬರೂ ಅಧಿಕಾರಿಗಳ ವಿರುದ್ಧವೂ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ವಿಜಯಾಪುರ ವರದಿ: ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಸ್.ಎಲ್. ಚಂದ್ರಶೇಖರ ಮತ್ತು ರಾಘವೇಂದ್ರ ಸೊಂಡೂರು ಅವರನ್ನು ವಜಾಗೊಳಿಸಿ ರಾಜ್ಯಪಾಲ ವಜುಬಾಯಿ ವಾಲಾ ಡಿ. 1ರಂದು ಆದೇಶ ಹೊರಡಿಸಿದ್ದರು. ಇವರಿಬ್ಬರೂ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದರು.
Comments
metro rail women commission notice mg road university governor ಮೆಟ್ರೋ ರೈಲು ಮಹಿಳಾ ಆಯೋಗ ನೋಟಿಸ್ ಎಂಜಿ ರಸ್ತೆ ವಿಶ್ವವಿದ್ಯಾಲಯ ರಾಜ್ಯಪಾಲ
English summary
Chairman of woman commission for state Manjula Manasa has given notice to two officers of metro railway station. She allied that officers showed inappropriate behavior with her.
Story first published: Wednesday, December 3, 2014, 12:11 [IST]