ಹುಟ್ಟು ಹಬ್ಬದಂದು ಮಗಳನ್ನು ಕೊಂದ ಪಾಪಿ ತಂದೆ
ಬೆಂಗಳೂರು, ಮಾರ್ಚ್ 26 : ಪತ್ನಿಯ ಶೀಲ ಶಂಕಿಸಿ ತಂದೆಯೊಬ್ಬ ಮಗಳನ್ನು ಹುಟ್ಟು ಹಬ್ಬದ ದಿನವೇ ಹತ್ಯೆ ಮಾಡಿದ್ದಾನೆ. ಬನಶಂಕರಿ ಠಾಣೆ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
5 ವರ್ಷದ ಲಕ್ಷ್ಮೀ ತಂದೆಯಿಂದ ಹತ್ಯೆಯಾದ ಮಗು. ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಲಕ್ಷ್ಮೀ ಶವ ಪತ್ತೆಯಾಗಿದೆ. ತಾಯಿ ನೀಡಿದ ದೂರಿನ ಆಧಾರದ ಮೇಲೆ ಲಕ್ಷ್ಮೀ ತಂದೆ ಲೋಕೇಶ್ (31) ನನ್ನು ಪೊಲೀಸರು ಬಂಧಿಸಿದ್ದಾರೆ. [ಬೆಂಗಳೂರು : ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು, ಸಿಐಡಿ ತನಿಖೆ]
ಪದೇ-ಪದೇ
ಗಲಾಟೆ
ಮಾಡುತ್ತಿದ್ದ
:
ಬೆಂಗಳೂರಿನ
ಬನಶಂಕರಿಯಲ್ಲಿ
ವಾಸವಾಗಿದ್ದ
ಚಾಮರಾಜನಗರ
ಮೂಲದ
ಲೋಕೇಶ್
ಪತ್ನಿ
ಜೊತೆ
ಪದೇ-ಪದೇ
ಜಗಳವಾಡುತ್ತಿದ್ದ.
ಪತ್ನಿಯ
ಶೀಲದ
ಬಗ್ಗೆ
ಶಂಕೆ
ವ್ಯಕ್ತಪಡಿಸುತ್ತಿದ್ದ
ಲೋಕೇಶ್
ಈ
ಮಗು
ನನ್ನದಲ್ಲ
ಎಂದು
ಹೆಂಡತಿ
ಜೊತೆ
ಜಗಳವಾಡಿದ್ದ.
[ಮದುವೆಗೆ
ಒಪ್ಪದ
ತಂದೆ-ತಾಯಿಯನ್ನು
ಕೊಲ್ಲಿಸಿದ
ಮಗ]
ಶನಿವಾರ ಲಕ್ಷ್ಮೀ ಹುಟ್ಟುಹಬ್ಬವಿತ್ತು. ಶುಕ್ರವಾರ ಸಂಜೆ ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸುವುದಾಗಿ ಮಗಳನ್ನು ಕರೆದುಕೊಂಡು ಹೋದ ಲೋಕೇಶ್, ಬಿಜಿಎಸ್ ಆಸ್ಪತ್ರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ. [ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಯಾಗಿದ್ದು ಮಗನಿಂದಲೇ!]
ಲಕ್ಷ್ಮೀ ತಾಯಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಲೋಕೇಶ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಲಕ್ಷ್ಮೀ ಶವ ಪತ್ತೆಯಾಗಿದೆ. ಬನಶಂಕರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.