ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು
ಬೆಂಗಳೂರು, ನ.30: ಅಕ್ರಮ ಗಣಿಗಾರಿಕೆ ಆರೋಪ ಹೊತ್ತು ಎಸ್ ಐಟಿಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಗಾಲಿ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತೀರ್ಪು ಪ್ರಕಟಿಸಲಾಗಿದೆ.
ಜನಾರ್ದನ
ರೆಡ್ಡಿಗೆ
ಷರತ್ತುಬದ್ಧ
ಜಾಮೀನು
ಮಂಜೂರು
ಮಾಡಲಾಗಿದೆ.
5
ಲಕ್ಷ
ರು
ಬಾಂಡ್,
ಇಬ್ಬರ
ಶ್ಯೂರಿಟಿ
ನೀಡಬೇಕು.
ಬಳ್ಳಾರಿ
ಅಥವಾ
ದೇಶದ
ಯಾವುದೇ
ನಗರಕ್ಕೆ
ತೆರಳುವಂತಿಲ್ಲ
ಬಳ್ಳಾರಿಗೆ
ತೆರಳಲು
ಕೋರ್ಟಿನಿಂದ
ಪೂರ್ವಾನುಮತಿ
ಪಡೆಯಬೇಕು.
ಎಸ್
ಐಟಿ
ವಿಚಾರಣೆಗೆ
ತಪ್ಪದೇ
ಹಾಜರಾಗಬೇಕು
ಎಂದು
ಷರತ್ತುವಿಧಿಸಲಾಗಿದೆ.
[ರೆಡ್ಡಿ
ಅರೆಸ್ಟ್,
ಸಿದ್ದು
ಸರ್ಕಾರ
ವಿರುದ್ಧ
ಸೋಮಶೇಖರ್
ಗರಂ]
ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ನ.20ರಂದು ಬಂಧಿಸಲಾಗಿತ್ತು. ಜನಾರ್ದನ ರೆಡ್ಡಿ ಅವರ ವಿರುದ್ಧ ಹೊಸದಾಗಿ ಕೇಸ್ ದಾಖಲಿಸಿಕೊಂಡು ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ ಐಟಿ) ಬಂಧನ ಮಾಡಿ ಲೋಕಾಯುಕ್ತ ವಿಶೇಷ ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ಅರ್ಜಿ ತೀರ್ಪನ್ನು ನ.30ಕ್ಕೆ ಕಾಯ್ದಿರಿಸಲಾಗಿತ್ತು.
ಬ್ಲಾಕ್ ಗೋಲ್ಡ್ ಮೈನಿಂಗ್ ಕಂಪನಿಯಿಂದ ಅಕ್ರಮವಾಗಿ 50,೦೦೦ ಮೆಟ್ರಿಕ್ ಟನ್ ಮಾರಾಟ ಮಾಡಿದ ಆರೋಪ ಮಾಡಿ ಎಸ್ಐಟಿ ಐಪಿಸಿ ಸೆಕ್ಷನ್ 407, 420 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಜನಾರ್ದನ ರೆಡ್ಡಿ ಅವರ ವಿರುದ್ಧ ಎಫ್ ಐಆರ್ ದಾಖಲು ಮಾಡಿಕೊಂಡಿದೆ.